ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಹಡಗನ್ನು ಮುಳುಗಿಸಿದ ಶಾಂಪೇನ್

ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ‘ದರ್ಗಾ’ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ.

“ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು. ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ. ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ದರ್ಗಾ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ. “ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು.

ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ.

ಕನಿಷ್ಠ ಉಡುಗೆ, ಗರಿಷ್ಠ ಅಪಾಯ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆ ತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರ ಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು ನಮ್ಮ ಸನ್ಮಾನ್ಯ ಗೃಹ ಮಂತ್ರಿಗಳು. ಈ ಹೇಳಿಕೆ ಸರಿಯಲ್ಲ, ಕಾಕ್ಟೇಲ್ ಪಾರ್ಟಿ ಗೆ ಹೋಗುವ ಮಹಿಳೆ ಬಿಕಿನಿಯಲ್ಲಿ ಹೋಗಲಾರಳು, ಸಂದರ್ಭಕ್ಕೆ ಅನುಸಾರವಾಗಿ ಆಕೆ ಬಟ್ಟೆ ತೊಡುವಳು ಎಂದು ಬಡಬಡಿಸಿದರು.

ಗೃಹ ಮಂತ್ರಿಗಳಿಗಿಂತ ಚೆನ್ನಾಗಿ ಸಮಾಜ ಕಾಯುವ ಪೊಲೀಸರಿಗೆ ತಾನೇ ಗೊತ್ತಿರೋದು ಸಮಾಜದ ಆಗುಹೋಗುಗಳು? ಕನಿಷ್ಠ ಬಟ್ಟೆ ತೊಟ್ಟ ಹುಡುಗಿ ಅಥವಾ ಮಹಿಳೆ ಯಾವುದೇ ಕಾರಣದಿಂದಲೂ ಒಳ್ಳೆಯ ಭಾವನೆ ತರಲಾರರು. ನಮ್ಮಲ್ಲಿ ಬರುವ ವಿದೇಶೀ ಮಹಿಳೆಯರನ್ನು ಗಂಡಸರು ನೋಡುವ ರೀತಿ ನೀವು ಗಮನಿಸಿರಲೇಬೇಕಲ್ಲ, ಅದಕ್ಕೆ ಕಾರಣ ಏನು, ಆಕೆಯ ಅಂಗ ಸೌಷ್ಠವದ ಪ್ರದರ್ಶನ. ಮೈ ಪ್ರದರ್ಶನ ನಡೆಸೋ ಮಹಿಳೆಯರು loose character ನವರು ಎಂದು ಬಹಳ ಜನ ತಪ್ಪಾಗಿ ತಿಳಿಯುತ್ತಾರೆ. ನಮಗೇಕೆ ವಿದೇಶೀ  ಜನರ ಉಡುಗೆ ತೊಡುಗೆ ಮೇಲೆ ವ್ಯಾಮೋಹ? ಅವರು ಕನಿಷ್ಠ ಉಡುಗೆ ತೊದಲು ಕಾರಣ ಯಾವಾಗಲೂ ಗಡಿ ಬಿಡಿ ಯಾಗಿರುವ ಅವರ ಚಟುವಟಿಕೆ ಯಾಗಿರಬಹುದು. ನಮ್ಮ ಮಹಿಳೆಯರ ಥರ ಉದ್ದದ ಕೂದಲನ್ನೂ ಸಹ ಬೆಳೆಸೋಲ್ಲ ಅವರು. ಸ್ನಾನದ ನಂತರ ಒಣಗಲು ನಂತರ  ಬಾಚಲು ಸಿಗದ ಸಮಯದ ಕಾರಣ. ಮಹಿಳೆಯರು ಅಂತರಂಗದ ಸೌಂದರ್ಯಕ್ಕೆ  ಪ್ರಾಶಸ್ತ್ಯ ಕೊಟ್ಟರಾಗದೆ? ಈ ವರದಿ ಆಂಗ್ಲ ಪತ್ರಿಕೆಯಲ್ಲಿ ಬಂದಿದ್ದೆ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಬಹುತೇಕ ಓದುಗರು ದಿನೇಶ್ ರೆಡ್ಡಿಯವರ ಮಾತಿಗೆ ಸಹಮತ ವ್ಯಕಪಡಿಸಿದರು. ದಿನೇಶ ರೆಡ್ಡಿಯವರ ಪ್ರಕಾರ ಗ್ರಾಮಾಂತರ ಪ್ರದೇಶಗಳಿಗೂ ಅಂಟಿಕೊಂಡಿದೆ ಈ ಪಿಡುಗು. ಪೊಲೀಸ್ ಮುಖ್ಯಸ್ಥರ ಹೇಳಿಕೆಗೆ ಮಹಿಳಾ ಸಂಘಟನೆಗಳು ರೆಡ್ಡಿಯವರನ್ನು chauvinist ಎಂದು ಮೂದಲಿಸಿದವು.

ನಮ್ಮ ಸಂಸ್ಕೃತಿ ಪಾಶ್ಚಾತ್ಯರಿಗಿಂತ ವಿಭಿನ್ನ, ಹಾಗೆಯೇ ಅಂಥಾ ಮಾಡರ್ನ್ ಸಂಸ್ಕಾರಕ್ಕೆ ನಮ್ಮ ಸಮಾಜ ಇನ್ನೂ ತಯಾರಾಗಿಲ್ಲ, ತಯಾರಾಗುವವರೆಗೆ ನಮ್ಮ ಸಂಸ್ಕೃತಿಗೆ ತಕ್ಕುದಾದ ಉಡುಗೆ ಧರಿಸುವುದು ಒಳಿತು.

ಜನರಿಗೆ ಭಯಪಡುವ ಮುಖ್ಯ ಮಂತ್ರಿ

ಇಂದು ಬೆಳಿಗ್ಗೆ ಮಲಯಾಳಿ ಒಬ್ಬಾತ ನಡೆಸುವ ಬುಫಿಯಾ ಎಂದು ಕರೆಯಲ್ಪಡುವ ಚಾದಂಗಡಿಯ ಟೀವಿಯಲ್ಲಿ ಕೇರಳದ ನೂತನ ಮಖ್ಯ ಮಂತ್ರಿಗಳ ಸಂದರ್ಶನವನ್ನು ಕೈರಳಿ ಚಾನಲ್ ನ ಬಾತ್ಮೀದಾರ ನಡೆಸುತ್ತಿದ್ದನ್ನು ವೀಕ್ಷಿಸಿದೆ. ಎರಡನೇ ಬಾರಿಗೆ ಮು. ಮಂತ್ರಿಯಾದ ಊಮ್ಮನ್ ಚಾಂಡಿ ಅನುಭವೀ ರಾಜಕಾರಣಿ.

ಬಾತ್ಮೀದಾರ ಕೇಳಿದ ಪ್ರಶ್ನೆಗಳಿಗೆ ವಿಚಲಿತನಾಗದೆ ನೇರವಾಗಿ ಉತ್ತರ ನೀಡುತ್ತಿದ್ದ ಮು. ಮಂತ್ರಿಗಳು ಕೆಲವೊಂದು ಕ್ಲಿಷ್ಟಕರ ಪ್ರಶ್ನೆಗಳನ್ನು ಎದುರಿಸಿದರು. ಕೇವಲ ಎರಡು ಶಾಸಕರ ಹೆಚ್ಚಳದ ಬಹುಮತ ಹೊಂದಿರುವ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಎಡರು ತೊಡರು ಗಳನ್ನು ಕಾಣದು ಎನ್ನುವುದು ಇವರ ವಿಶ್ವಾಸ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಯಾರಿಗೂ ಭಯ ಪಡುವ ಅವಶ್ಯಕತೆ ಎನಗಿಲ್ಲ ಎಂದಾಗ ಮು. ಮಂತ್ರಿಗಳನ್ನು ಬಾತ್ಮೀದಾರ ಕೇಳಿದ, ಭಯವಿಲ್ಲ ಎಂದಿರಲ್ಲ ಯಾರ ಭಯವೂ ಇಲ್ಲವೇ? ಆಗ ಮು. ಮಂತ್ರಿಗಳು ಹೇಳಿದ್ದು “ನನಗೆ ದೇವರ ಮೇಲೆ ಭಯ ಮತ್ತು ಜನರ ಭಯ ಇದೆ, ಅಷ್ಟೇ”.  

ಮಂತ್ರಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ಕೇಳಲಾಗಿ integrity, common sense ಇದ್ದರೆ ಕೆಲಸ ಸುಗಮ ಎಂದರು. ಒಳ್ಳೆಯ ಮಾತುಗಳೇ. ಆದರೆ ಅವರು ಹೇಳಿದ ಈ ಎರಡು ಗುಣದ್ವಯಗಳು ರಾಜಕಾರಣಿ ಅಥವಾ ಮಂತ್ರಿ ಮಹೊದಯರುಗಳಲ್ಲಿ ಇದ್ದಿದ್ದರೆ ನಮ್ಮ ದೇಶ ಹೀಗೆ ಇರುತ್ತಿತ್ತೇ?    

ಕೊನೆಗೆ ಮುಖ್ಯಮಂತ್ರಿಗಳು ಸಂದರ್ಶನದ ಅವಧಿಯಲ್ಲಿ ದೇವರ ಪ್ರಸ್ತಾವನೆ ಮಾಡಿದ್ದನ್ನು ಮತ್ತೊಮ್ಮೆ ಕೆದಕುತ್ತಾ ಆತ ಕೇಳಿದ ಇಂದು ಬೆಳಿಗ್ಗೆ ದೇವರಲ್ಲಿ ಏನನ್ನು ಬೇಡಿ ಕೊಂಡಿರಿ ಎಂದು. ಅದಕ್ಕೆ ಊಮ್ಮನ್ ಚಾಂಡಿ ನೀಡಿದ ಉತ್ತರ “ಯಾವುದೇ ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ನಾನು ದೇವರಲ್ಲಿ ಕೇಳೋಲ್ಲ, ನಾನು ಮಾಡುವ ಕೆಲಸಗಳು ಸರಿಯಾದ ಮಾರ್ಗದಲ್ಲಿ ಇರಲು ಸಹಕರಿಸು ಎಂದು ಮಾತ್ರ ಕೇಳಿ ಕೊಳ್ಳುತ್ತೇನೆ”.  

ಅತ್ಯಂತ ಸರಳವಾಗಿ ಬದುಕುವ, ತಲೆ ಸಹ ಬಾಚದ, ಇಸ್ತ್ರಿ ಹಾಕಿದ ಬಟ್ಟೆ ಧರಿಸದ, ದೇವರನ್ನು ಭಯಪಡುವ ದೈವ ಭಕ್ತ, ಜನರಿಗೆ ಹೆದರುವ ಪ್ರಜಾಪತಿ ಕೇರಳ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸಲಿ ಎಂದು ಹಾರೈಸೋಣ.

ನಮ್ಮ ರಾಜ್ಯದ ರಾಜಕಾರಣ

ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).

ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ ಮಕ್ಕಳು ಮುಂದು ಎಂದರೆ ನಮ್ಮ “ಗುರು ದೇವೋಭವಃ” ಸಮುದಾಯ ಹಗಲು ರಾತ್ರಿ ಸಂಶೋಧನೆ ಮಾಡಿ ಹೊಸತನ್ನೇನಾದರೂ ಕಂಡು ಹಿಡಿದಿರಬೇಕು ಗಣಿತ ವನ್ನು amusing ಮಾಡಲು ಮತ್ತು ಜಾಗ್ರಫಿ ಯನ್ನು interesting ಆಗಿಸಲು. ಬಿಡ್ತು ಅನ್ನಿ, ಹಾಗೇನಿಲ್ಲ. ಸರಕಾರ ವಿದ್ಯೆ ಕೊಡುವ ಸಮುದಾಯಕ್ಕೆ ಕೊಡುವ ಸಂಬಳದ ಚೆಂದ ನೋಡಿದರೆ ಅಂಥ ಕಾಲ ಇನ್ನೂ ಬಹು ದೂರ. ಕಲಿಕೆಯಲ್ಲಿ innovation ತರುವ ಮಾತಿರಲಿ, ಬಾರುಕೋಲಿನ ಪ್ರಯೋಗ ಇಲ್ಲದೆ ಪಾಠ ಹೇಳಿದ್ದರೆ ಸಾಕಿತ್ತು ಶಿಕ್ಷಕರು. ಗಣಿತದಲ್ಲೂ, ಭೂಗೋಳದಲ್ಲೂ ನಮ್ಮ ಮಕ್ಕಳು ಮುಂದೆ ಎಂದ ಮಾತಿನಲ್ಲಿ ರಾಜಕಾರಣ ಅಡಗಿದೆ. ಪ್ರತಿಯೊಂದರಲ್ಲೂ ರಾಜಕಾರಣ ಕಾಣುವ ಸಮಾಜ ತಾನೆ ನಮ್ಮದು?

ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ, ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ. ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ, ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ. ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ, ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು. ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು. ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ, ಥೇಟ್ ನಮ್ಮ BSE Index ಥರ. ಸ್ಟಾಕ್ ಎಕ್ಸ್ಚೇಂಜ್ ರೀತಿ. ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ. ಅಥವಾ “ವೈಸೀ ವರ್ಸಾ”. ಹೀಗೆ ದಿನವೂ ಕೂಡುತ್ತಾ, ಕಳೆಯುತ್ತಾ ಏರುಪೇರಾಗುವ, ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು, ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು. ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ. ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ. ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು. ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ.

ಒಂದು ಡೇರೆಯಿಂದ ಮತ್ತೊಂದು ಡೇರೆ ಗೆ ಕೆಲವು ಶಾಸಕರು ಜಿಗಿದರೆ ಯಾರು ಮು. ಮಂತ್ರಿ ಆಗಬಹುದು ಎನ್ನುವ ಸಂಭವನೀಯತೆ. ಸಂಭವನೀಯತೆಯಲ್ಲಿ ನಾಣ್ಯ ಚಿಮ್ಮುವ ಉದಾಹರಣೆ ಕೊಟ್ಟರೆ ರಾಜಕಾರಣದ ಸಂಭವನೀಯತೆಯಲ್ಲಿ ಡೇರೆ ಜಿಗಿಯುವ ಉದಾಹರಣೆ. ಅತೃಪ್ತ ಸದಸ್ಯರನ್ನು round the world, ಕ್ಷಮಿಸಿ, round the state ಟೂರಿಗೋ, ಅಥವಾ across the sate sojourn ಗೋ ಕಳಿಸಿದಾಗ ಜಾಗ್ರಫಿ ಸಹ ಮೂಡಿ ಬಂತು ತೆರೆಯ ಮೇಲೆ. ಯಾವ ಯಾವ ರೆಸಾರ್ಟ್ ಎಲ್ಲಿದೆ, ಅಡಗುತಾಣಗಳ ವಿಳಾಸ ಇವೆಲ್ಲವನ್ನೂ ತಿಳಿದಾಗ ಜಾಗ್ರಫಿ ಸಹ ಕರಗತವಾಗದೆ ಇದ್ದೀತೆ? ಅಷ್ಟೇ ಅಲ್ಲ, ಟೂರ್ ಹೊಡೆಸಿ, ಆಳಲು ಬೇಕಾದ ಮಾಂತ್ರಿಕ ಸಂಖ್ಯೆಯನ್ನು ಹೊಂದಿಸಿ, ನಂತರ ನಮ್ಮ ದೇಶದ ಅಧ್ಯಕ್ಷೆ ಯವರ ಹತ್ತಿರ ಪರೇಡ್ ಸಹ ಮಾಡಿಸಬೇಕು. ಅದಕ್ಕೆ ದಿಲ್ಲಿಗೆ ಹೋಗಬೇಕು. ಜಾಗ್ರಫಿ ಜ್ಞಾನ ವಿಸ್ತಾರ ಆಯಿತು ನೋಡಿ. ಆ ಪರೇಡ್ ಸಮಯ ಬರೀ ಮು. ಮಂತ್ರಿಗಳೂ, ಶಾಸಕ ಮಹೋದಯರೂ ಇದ್ದರೆ ಸಾಲದು, ಅವರನ್ನು ಕಾಯಲು ಪಕ್ಷದ ವತಿಯಿಂದ ವರಿಷ್ಠ ರೂ ಬರಬೇಕು, ವಿರೋಧೀ ಪಾಳಯ ದೂರದಲ್ಲಿ ನಿಂತು ಗೋವಾದ ಗೋಲ್ದನ್ ಬೀಚ್ ನ ಚಿತ್ರವನ್ನೋ, ನಾನ್ ಸ್ಟಾಪ್ ಅಂಕೆಗಳಿರುವ ಚೆಕ್ ನ ಫೋಟೋ ಕಾಪಿಯನ್ನೋ ತೋರಿಸಿ ಈಚೆ ಕಡೆ ಎಳೆದುಕೊಂಡು ಬಿಟ್ಟರೆ? ಪರೇಡ್ ಒಂದು ರೀತಿಯ ಮುಜುಗರ ತರುವ ಕಪ್ಪೆ ತೂಕವಾಗಿ ಪರಿವರ್ತನೆ ಆಗಬಾರದು ನೋಡಿ.

ನಮ್ಮ ಈ ರಾಜಕೀಯ ಅವ್ಯವಸ್ಥೆಗೆ ಪ್ರಜಾಪ್ರಭುತ್ವ ಎನ್ನುವ ಹೆಸರೇ ಒಂದು ‘misnomer’. ಅಪಪ್ರಯೋಗ. ಈ ವ್ಯವಸ್ಥೆಯಲ್ಲಿ ಪ್ರಜೆ ಪ್ರಭುವಾಗೋದು ಮತದಾನ ಕೇಂದ್ರದ ಕಡೆಗಿನ ನಡಿಗೆ ವೇಳೆ ಮಾತ್ರ. ಅವನನ್ನು ಕಳ್ಳ ನಗೆಯಿಂದ, ಓಲೈಸಲು ಡಜನ್ ಗಟ್ಟಲೆ ಜನ. ಮತದಾನವಾಯಿತೋ, ಆ ಕೂಡಲೇ ಅವನು ಹತಾಶ ಏಕಾಂಗಿ, ಮುಂದೆ ಅನಾವರಣಗೊಳ್ಳಲಿರುವ ನಾಟಕದ ಪರದೆ ಮುಂದೆ.