ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ‘ದರ್ಗಾ’ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.
ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ.
“ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು. ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ. ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ದರ್ಗಾ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.
ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ. “ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು.
ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ.