ಪಾಕ್ ಮತ್ತು ಕಾಲ್ಚೆಂಡು

ನಮ್ಮನ್ನು ಕಾಲ್ಚೆಂಡಿನಂತೆ ನಡೆಸಿಕೊಳ್ಳುವ ಪಕ್ಕದ ದೇಶ ಪಾಕಿಗೆ ಕಾಲ್ಚೆಂಡಿನ ಮೇಲೆ ಅದ್ಯಾವ ಮೋಹವೋ ಏನೋ? ಕಾಲ್ಚೆಂಡಿನಾಟ ಪಾಕ್ ನೆಲದಲ್ಲಿ ಅಷ್ಟೇನೂ ಆಳವಾಗಿ ಬೇರೂರದೆ ಇದ್ದರೂ ವಿಶ್ವದ ಕ್ರೀಡಾ ಪಟುಗಳ ಕಾಲುಗಳಿಗೆ ಸುಂದರ, ಉತ್ಕೃಷ್ಟ ಚೆಂಡುಗಳನ್ನಂತೂ ಹೊಲಿದು ಕೊಡುತ್ತಾರೆ. ಇಂಥ ಒಳ್ಳೆಯ ಚಟುವಟಿಕೆಗಳಲ್ಲಿ ಪಾಕಿಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ ಅವರ ಆರ್ಥಿಕ ಸ್ಥಿತಿಗೆ ಒಳ್ಳೆಯದು ಮಾತ್ರವಲ್ಲ ನಮ್ಮ ಚಿತ್ತ ಸ್ವಾಸ್ಥ್ಯಕ್ಕೂ ಒಳ್ಳೆಯದೇ. ಅದ್ಹೇಗೆ ಅಂತೀರಾ? ಬಿಡುವಿನ ಸಮಯ ಅಥವಾ ಮಾಡಲು ಯಾವುದೇ ಕಸುಬಿಲ್ಲದಾದಾಗ ನಮ್ಮ ಗಡಿಯೊಳಕ್ಕೆ, ನಗರದೊಳಕ್ಕೆ ಭಯೋತ್ಪಾದಕರನ್ನು ನುಗ್ಗಿಸಿ ರಕ್ತ ಹರಿಸೋದಕ್ಕಿಂತ ಕಾಲ್ಚೆಂಡು ಹೊಲೆದು ಕ್ರೀಡಾಪಟುಗಳ ಬೆವರು ಹರಿಸಿದರೆ ನಮಗೆ ನೆಮ್ಮದಿ ತಾನೇ? ಇವರಿಗೆ ನಿರಂತರವಾಗಿ ಕಾಲ್ಚೆಂಡ ನ್ನು ಹೊಲೆಯುವ ಕೆಲಸ ಕೊಡಲು ಬೇಕಾದರೆ ಕ್ರಿಕೆಟ್ ಜೊತೆಗೇ ನಾವು ಫುಟ್ ಬಾಲ್ ಸಹ ಆಡೋಣ, ಒಂದಿಷ್ಟು ಕಾಲ್ಚೆಂಡುಗಳ ಆರ್ಡರ್ ಅವರಿಗೆ ರವಾನಿಸಿ ತುಪಾಕಿಗಳ ಸಹವಾಸದಿಂದ ಅವರನ್ನು ಮುಕ್ತಗೊಳಿ ಸೋಣ. ಸರಾಸರಿ ವರ್ಷಕ್ಕೆ ನಾಲ್ಕು ಕೋಟಿ ಚಂಡುಗಳನ್ನು ಉತ್ಪಾದಿಸುವ ಪಾಕಿ ನಗರ ಸಿಯಾಲ್ಕೋಟ್ ವಿಶ್ವ ಪ್ರಸಿದ್ಧಿ ಪಡೆದ ಕ್ರೀಡಾ ಸಂಸ್ಥೆಗಳಾದ ಅಡಿಡಾಸ್, ನೈಕಿ, ರೀಬಾಕ್, ಲೋಟೋ, ಗಳಿಗೆ ಹಗಲು ರಾತ್ರಿ ಚೆಂಡು ಗಳನ್ನು ಸರಬರಾಜು ಮಾಡಿ ವಿದೇಶಿ ವಿನಿಮಯ ಗಳಿಸುತ್ತಿದೆ. ಒಳ್ಳೆಯ ಸಂಪಾದನೆ ನೋಡಿ. ಅಮಾಯಕರ ರಕ್ತ ಹರಿಸಿ ಅವರ ಶಾಪ ಸಂಪಾದಿಸುವುದಕ್ಕಿಂತ ಈ ಕಸುಬು ಲೇಸು ಅಲ್ಲವೇ? ಇಷ್ಟು ದೊಡ್ಡ ಮೊತ್ತವನ್ನು ವಿದೇಶೀ ವಿನಿಮಯದ ಮೂಲಕ ಗಳಿಸುತ್ತಿರುವ ಪಾಕ್ ಮೇಲೆ ಈಗ ಚೀನಾ ಕಣ್ಣು ಹಾಕಿದೆಯಂತೆ. ಕೇವಲ ಆರು ಡಾಲರಿಗೆ ಚೆಂಡನ್ನು ಮಾರುತ್ತಿದ್ದ ಪಾಕಿಗಳಿಗೆ ಚೀನಾ ಸೆಡ್ಡು ಹೊಡೆದು ಮೂರು ದಾಲರಿಗೂ ಮಾರಲು ತಯಾರು ಎಂದು ಸಿಯಾಲ್ಕೋಟ್ ನ ಉದ್ಯಮಿಗಳಿಗೆ ನಡುಕ. ಕಳೆದ ವರ್ಷ ೩೦೦ ಜನ ಸೇರಿ ೫,೪೧,೧೭೬ ಮಾವಿನ ಸಸಿ ನೆಟ್ಟು ಗಿನ್ನೆಸ್ ದಾಖಲೆ ಸಹ ಮಾಡಿದರು. ಇದೊಂದು ರೀತಿಯ ವಿಸ್ಮಯಕಾರೀ ವಿಷಯ ಅಲ್ಲವೇ? ಕೋವಿ, ಬಾಂಬು, ಅಂತ ಸಾವನು ನೆಡುತ್ತಾ ಸಾಗುವ ಮಂದಿಗೆ ಮಾವಿನ ಸಸಿ ನೆಡುವ ಚಾಳಿ. ಏರುವ ಸಮುದ್ರ ಮಟ್ಟ ವನ್ನು ತಡೆಯಲು ಈ ರೀತಿ ಕರಾವಳಿ ಪ್ರದೇಶದಲ್ಲಿ ಮಾವಿನ ಸಸಿ ನೆಡುತ್ತಾರಂತೆ ಪಾಕಿಗಳು. ಅವರು ಕರಾವಳಿಯಲ್ಲಿ ಮಾವನ್ನೋ, ಆಟದ ಮೈದಾನದಲ್ಲಿ ಚೆಂಡನ್ನೋ ನೆಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟರೆ ಸಾಕು ಎಂದಿರಾ? ಈ ಮೇಲಿನ ಎರಡು ವಿದ್ಯಮಾನಗಳು ನಾಗರೀಕ ಸಮಾಜ ಮೆಚ್ಚುವಂಥದ್ದು. ಇಂಥ ಇನ್ನಷ್ಟು ಚಟುವಟಿಕೆಗಳು ಅವರ ದೇಶದೆಲ್ಲೆಡೆ ಹರಡಿ ಅವರಿಗೆ ಸುಭಿಕ್ಷೆಯನ್ನೂ ನಮಗೆ ನೆಮ್ಮದಿಯನ್ನೂ ತರಲಿ.

ಹಸಿರು, ಬಿಳಿ, ಕೇಸರಿ

ನಮ್ಮ ಹೆಮ್ಮೆಯ ಧ್ವಜದ ವರ್ಣಗಳು ಕೇಸರಿ ಬಿಳಿ ಹಸಿರು. ಈ ವರ್ಣಗಳು ತನ್ನೊಡಲಲ್ಲಿ ಕಾಣುವಂತೆ ಇಟ್ಟುಕೊಂಡ ನೀಲಿ ಚಕ್ರ ನಮ್ಮ ಪ್ರಗತಿಗೆ ಸಾಕ್ಷಿ. ಹೀಗೆ ಕೇಸರಿ ಬಿಳಿ ಹಸಿರು ತಲೆಕೆಳಗಾಗಿ ಹಸಿರು ಬಿಳಿ ಕೇಸರಿಯಾದಾಗ ವರ್ಣಗಳು ಕಂಗೆಡದಿದ್ದರೂ ನಾವಂತೂ ಖಂಡಿತಾ ಒಂದು ಕ್ಷಣ ಗರ ಬಡಿ ದವರಂತೆ ನಿಂತು ಬಿಡುತ್ತೇವೆ ಲೆಕ್ಕಾಚಾರ ಹಾಕುತ್ತಾ ಇದು ಶತ್ರುವಿನ ಹುನ್ನಾರವೋ, ಕುಹಕವೋ ಅಥವಾ ಎಂದಿಗೂ ಆಗಬಾರದ ಪ್ರಮಾದವೋ ಎಂದು. ಮೊನ್ನೆ ನಮ್ಮ ಗೃಹ ಮಂತ್ರಿಗಳು ಪಾಕಿಸ್ತಾನಕ್ಕೆ ಹೋಗಿ ಬಂದರು. ನಮ್ಮ ಆಂತರಿಕ ವಿಷಯಗಳಲ್ಲಿ ತಲೆ ಹಾಕಬೇಡಿ, ನಮ್ಮ ಬೀದಿ, ಹೋಟೆಲ್, ರೈಲು ನಿಲ್ದಾಣಗಳಲ್ಲಿ ನೆತ್ತರ ಹರಿಸಬೇಡಿ ಎಂದು ಎಷ್ಟೇ ಕೂಗಿಕೊಂಡರೂ ಕೇಳಿಸದಂತೆ ನಟಿಸುವ ಪಾಕಿಗೆ ಅವರಿರುವ ಅಡ್ಡಾ ಕ್ಕೆ ಹೋಗಿ ಬುದ್ಧಿವಾದ ಹೇಳಲು ಚಿದಂಬರಮ್ ಸಾಹೇಬರು ಇಸ್ಲಾಮಾಬಾದ್ ತಲುಪಿದರು ಅಲ್ಲಿನ ಗೃಹ ಮಂತ್ರಿ ರೆಹಮಾನ್ ಮಲಿಕ್ ರೊಂದಿಗೆ ಮಾತುಕತೆಗೆಂದು. ಮಾತುಕತೆಗೆ ಕೂತ ಕೂಡಲೇ ಪತಾಕೆ ಉಲ್ಟಾ ಆದದ್ದನ್ನು ಗಮನಿಸಿದ ಚಿದಂಬರಮ್ ಅದನ್ನು ಸರಿಪಡಿಸಿದರು. ಆದರೆ ಮಾಧ್ಯಮಗಳ ಕಣ್ಣಿಗೆ ಅದಾಗಲೇ ಬಿದ್ದಾಗಿತ್ತು. ಮಾಧ್ಯಮಗಳಿಗೂ ಬೇಕಿದ್ದು ಇಂಥ ಎಡವಟ್ಟು ಗಳೇ. ಪಾಕ್ ಏನು ಮಾಡಿದರೂ ಸುದ್ದಿಯೇ. ಅದರಲ್ಲೂ ಭಾರತೀಯರು ಒಳಗೊಂಡ ಯಾವುದೇ ವಿಷಯಾದರೂ, ಭೇಟಿಯಾದರೂ ಹೆಚ್ಚು ಹೇಳುವುದು ಬೇಕಿಲ್ಲ. ಅಷ್ಟು ಚೆಂದ ನಮ್ಮೀರ್ವರ ಸಂಬಂಧ. ಮೂರು ದಶಕಗಳ ನಂತರ ಭಾರತದ ಗೃಹ ಮಂತ್ರಿ ಪಾಕ್ ನೆಲದ ಮೇಲೆ ಎಂದಾಗಲೇ ತಿಳಿಯುತ್ತದೆ ಸಂಬಂಧ ಎಷ್ಟು ತಿಳಿಯಾಗಿದೆ ಎಂದು. ಪಾಕ್ ಅದೇನು ಮಾಡಿದರೂ ತಪ್ಪೇ ಏಕಾಗುತ್ತದೆ ಎನ್ನುವುದೇ ಕಾಡುವ ಪ್ರಶ್ನೆ.

ಸರಿ ರಾಜಕೀಯ ಬದಿಗಿಟ್ಟು ಬಾವುಟಕ್ಕೆ ಬರೋಣ. ಬಾವುಟ ಲಾಗ ಹಾಕಿ ಉಲ್ಟಾ ಆಗುವ ಪರಿಸ್ಥಿತಿ ಇದೇ ಮೊದಲಲ್ಲ. ಶಿಕಾಗೋ ನಗರದ ಡೇಲಿ ಪ್ಲಾಜ ದಲ್ಲೂ ಒಮ್ಮೆ ಇದು ಸಂಭವಿಸಿತು.

೨೦೦೮ ರಲ್ಲಿ ಭಾರತ ಆಸ್ಟ್ರೇಲಿಯಾ ನಡುವಿನ ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆಯೂ ಇದೇ ತೆರನಾದ ಪ್ರಮಾದ.

ಭಯೋತ್ಪಾದನೆಯ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ತಾರೆ ಕಿಂ ಶರ್ಮಾ ಉಲ್ಟಾ ಆದ ಬಾವುಟದ ಚಿತ್ರ ತನ್ನ ಅಂಗಿ ಮೇಲೆ ಪ್ರದರ್ಶಿಸಿದ್ದರು.

ದಿಲ್ಲಿ ಪಬ್ಲಿಕ್ ಶಾಲೆಯಲ್ಲೂ ಇಂಥದ್ದೇ ಒಂದು ಘಟನೆ ನಡೆದು ಗಮನಕ್ಕೆ ತಂದವನ ಮೇಲೆಯೇ ಹರಿಹಾಯ್ದರು  ಅಲ್ಲಿನ ಪ್ರಾಂಶುಪಾಲೆ. ನಿನ್ನಂಥ ದೇಶಭಕ್ತರನ್ನು ಬಹಳ ಕಂಡಿದ್ದೇನೆ ಎಂದು ತಮ್ಮ ಕಛೇರಿಯಿಂದ ಅಟ್ಟಿದರು ಬಡಪಾಯಿಯನ್ನು. ಆತ ಕೋರ್ಟು ಕಛೇರಿ ಎಂದು ಒಂದೆರಡು ದಿನ ಅಲೆದಾಡಿ ಸುಮ್ಮನಾದ.    

ನನ್ನ ನೆನಪು ಸರಿಯಿದ್ದರೆ ೧೯೮೮ ರಲ್ಲಿ ಇಂಥದ್ದೇ ಒಂದು ಘಟನೆ ನಮ್ಮ ದೇಶದಲ್ಲೂ, ಅದರಲ್ಲೂ ಕರ್ನಾಟಕದಲ್ಲಿ. ನಮ್ಮ ಖಾದಿ ಪ್ರಭುಗಳು ಕೂರುವ, ರಾಜ್ಯದ ಹಿತಾಸಕ್ತಿಗೆಂದು ಪರಸ್ಪರ ಕಚ್ಚಾಡುವ ವಿಧಾನ ಸೌಧದ ಮೇಲೆ  ಸ್ವಾತಂತ್ರ್ಯ ದಿನಾಚರಣೆ ದಿನ ಏರಿತು ಹಾರಿತು ನೋಡು ನಮ್ಮ ಬಾವುಟ, ಅದೂ ತಲೆಕೆಳಗಾಗಿ. ತಮಾಷೆಯಲ್ಲ, ಸತ್ಯ ಘಟನೆ ಇದು. ಇದನ್ನು ಗಮನಿಸಿದ ಯಾರೋ ಒಬ್ಬರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಫೋನಾಯಿಸಿ ನಿಮಗೊಂದು ಬಿಸಿ ಬಿಸಿ ಮಸಾಲೆ ದೋಸೆಯಂಥ ಸುದ್ದಿ ಇದೆ ಬನ್ನಿ ಕ್ಯಾಮರಾದೊಂದಿಗೆ ಎಂದು ಆಹ್ವಾನ ಕಳಿಸಿದರು. ದೌಡಾಯಿಸಿ ಬಂದ ಪತ್ರಕರ್ತನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಪ್ರಭುಗಳು ಕೂರುವ ಸ್ಥಳದಲ್ಲಿ ಪ್ರಮಾದವೇ, ಹ ಹಾ ಎನ್ನುತ್ತ ಮನ ಬಂದಂತೆ ಕ್ಲಿಕ್ಕಿಸಿ ಹಾಕಿ ಬಿಟ್ಟ ಮಾರನೆ ದಿನದ ಪತ್ರಿಕೆಯ ಮುಖ ಪುಟದಲ್ಲಿ. ಅದರ ಕೆಳಗೆ ಒಂದು ಶೀರ್ಷಿಕೆ. ಇದು ನಮ್ಮ ಬಾವುಟವೇ, ಸಂಶಯ ಬೇಡ, ಸ್ವಲ್ಪ ಉಲ್ಟಾ ಆಗಿದೆ ಅಷ್ಟೇ ಎಂದು. ಸರಕಾರೀ ನೌಕರನ ಕಛೇರಿಯಲ್ಲಿ ಇಂಥದ್ದು ನಡೆದಿದ್ದರೆ ಸಂಬಂಧಿಸಿ ದವನನ್ನು ಎತ್ತಂಗಡಿ ಮಾಡಬಹುದಿತ್ತು, ಎತ್ತಂಗಡಿ ಮಾಡುವವನ ಕಛೇರಿಯಲ್ಲೇ ಇಂಥ ಘಟನೆ ನಡೆದರೆ ಏನು ಶಿಕ್ಷೆ? ಭಾರತ ಖಂಡದ ಚಕ್ರವರ್ತಿ ಅಕ್ಬರನ ಗಡ್ಡ ಎಳೆದವನಿಗೆ ಸಿಕ್ಕ ಶಿಕ್ಷೆಯೇ?

  ಬಾವುಟ ಹಾರಿಸುವ ಬಗ್ಗೆ ಹೀಗೆಂದು ನಮ್ಮ ನಿಯಮ.  “the flag shall not be intentionally displayed with the ‘saffron’ down.”

ಹೀಗೊಬ್ಬ ಶ್ರೀಮಂತ….ಹೆಸರು Warren Buffet ಅಂತ

ಸೋಮಾರಿತನದಿಂದ ಈ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸದೆ ಮಾಜಿ ಯಜಮಾನರ ಭಾಷೆಯಲ್ಲೇ ಹಾಕಿದ್ದೇನೆ, ಕ್ಷಮಿಸಿ, ಆದರೆ ಕನ್ನಡಿಗರು ಕನ್ನಡದಷ್ಟೇ ಆಂಗ್ಲ ಭಾಷೆಯಲ್ಲೂ ನಿಪುಣರು ಅನ್ನೋ ಭರವಸೆಯೊಂದಿಗೆ,  

1. He bought his first share at age 11 and he now regrets that he started too late! Things were very cheap that time; Encourage your children to invest.

2. He bought a small farm at age 14 with saving from delivering newspapers. One could have bought many things with the little savings. Encourage your children to start some kind of business.

3. He still lives in the same small 3-bedroom house in mid-town Omaha, that he bought after he got married 50 years ago. He says that he has everything he needs in that house. His house does not have a wall or fence. Don’t buy more than what you really need and encourage your children to do and think the same.

4. He drives his own car everywhere and does not have a driver or security people around him. You are what you are.

5. He never travels by private jet, although he owns the world’s largest private jet company. Always think how you can accomplish things economically.

6. His company, Berkshire Hathaway, owns 63 companies. He writes only one letter each to the CEOs of these companies, giving them goals for the year. He never holds meetings or calls them on a regular basis. Assign the right people to the right jobs.

7. He has given his CEO’s only two rules. Rule No. 1: Do not lose any of your share holder’s money. Rule No. 2: Do not forget rule no. 1. Set goals and make sure people focus on them.

8. He does not socialized with the high society crowd. His past time after he gets home is to make himself some pop corn and watch television. Don’t try to show off. Just be yourself and do what you enjoy doing.

9. Warren Buffet does not carry a cellphone or has a computer on his desk.

10. Bill Gates, the world’s richest man met him for the first time only 5 years ago. Bill Gates did not thought he had anything in common with Warren Buffet, so he scheduled his meeting only for half hour. But when Gates met him, the meeting lasted for 10 hours and Bill Gates become a devotee of Warren Buffet. —

HIS ADVICE TO YOUNG PEOPLE:

“Stay away from credit cards (bank loans) and invest in yourself and remember: – Money doesn’t create man but it is the man who created money.

– Live your life as simple as you are. – Don’t do what others’ say, just listen to them, but do what you feel is good.

– Don’t go on brand name; just wear those things which you feel comfortable.

– Don’t waste your money on unnecessary things; just spend on them who are really in need.

-After all, its your life, then why give chance to others to rule our life?

ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ

ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ರಾಜ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಆ ಕತೆ ಓಬೀರಾಯನ ಕಾಲದ್ದು. ಬನ್ನಿ ಇಲ್ಲೊಬ್ಬ ನೀರೋ ನ ಪರಿಚಯ ಮಾಡಿಕೊಳ್ಳಿ. ಇಡೀ ಸಮುದ್ರವನ್ನೇ ತನ್ನ ತೈಲದಿಂದ ಕಲುಷಿತಗೊಳಿಸಿ ಸಮುದ್ರ ಜೀವಿಗಳಿಗೆ ನೆಲೆಯಿಲ್ಲದಂತೆ ಮಾಡಿದ, ಸುಂದರ ಅಗಾಧ ನೀರನ್ನು ಭೀಭತ್ಸವಾಗಿಸಿ ತದನಂತರ ಏನೂ ಅರಿಯದವನಂತೆ ದೋಣಿ ವಿಹಾರಕ್ಕೆ ಹೊರಟ ತೈಲ ಸೋರಿಕೆಗೆ ಕಾರಣವಾದ ಕಂಪೆನಿಯ CEO Tony Hayward.  ಸ್ವಲ್ಪ ಯೋಚಿಸಿ ನೋಡಿ, ಈ ತೆರನಾದ ತೈಲ ಸೋರಿಕೆ ನಮ್ಮ ರಿಲಯನ್ಸ್ ನವರೋ ಅಥವಾ ಬೇರಾವುದಾದರೂ ಬಡ ರಾಷ್ಟದ ಕಂಪೆನಿಗಳು ಮಾಡಿದ್ದರೆ ಬಾಲಕ್ಕೆ ಕಿಚ್ಚು ಬಿದ್ದ ಹಾಗೆ ಆಡುತ್ತಿದ್ದರು ಸೂಟು ಬೂಟು ತೊಟ್ಟ ಬಿಳಿಯರು. ಇಷ್ಟೆಲ್ಲಾ ಅವಾಂತರ ಮಾಡಿದ ಹೇವರ್ಡ್ isle of Wight ಪ್ರವಾಸಿ ತಾಣಕ್ಕೆ ಹೋಗಿ ಅಲ್ಲೂ ಏನಾದರೂ ಕಪಿ ಚೇಷ್ಟೆ ಮಾಡಲು ಸಾಧ್ಯವೇ ಎಂದು ಲೆಕ್ಕ ಹಾಕುತ್ತಿರಬಹುದು ಎಂದು ನಿಮಗೆ ತೋಚಿದರೆ ಅಚ್ಚರಿಯಿಲ್ಲ. ದೂರದ ಮೆಕ್ಸಿಕೋ ಕೊಲ್ಲಿಯಲ್ಲಿ ರಾದ್ಧಾಂತ ಮಾಡಿ, ತಮ್ಮ ಸಂಗಡಿಗರ ಬದುಕನ್ನು ನರಕರೋದನವಾಗಿಸಿದ ಈ ಮಹಾತ್ಮನನ್ನು ದ್ವೀಪದ ಪ್ರಾಣಿ ಪಕ್ಷಿಗಳು ನೋಡಿ ಬದುಕಿದೆಯಾ ಬಡಜೀವವೇ ಎಂದು ಬೇರೆಲ್ಲಾದರೂ ತೊಲಗಿದರೆ ಅಚ್ಚರಿಯಿಲ್ಲ ಅನ್ನಿ. 

ಭೂಪಾಲ್ ನಲ್ಲಿ ಸಂಭವಿಸಿದ್ದೂ ಇದೇ ರೀತಿಯ ಒಂದು ಸೋರಿಕೆ ತಾನೇ? ಕೊಲ್ಲಿಯಲ್ಲಿ ತೈಲ ಸೋರಿಕೆ, ಭಾರತದಲ್ಲಿ ಅನಿಲ ಸೋರಿಕೆ. ವಿಷಾನಿಲವನ್ನು ಆಗಸಕ್ಕೆ ಬಿಟ್ಟು ಸಾವಿರಾರು ಜನ ರನ್ನು ಕೊಂದು, ಹುಟ್ಟಿದ, ಹುಟ್ಟುತ್ತಲೂ ಇರುವ ಮಕ್ಕಳು ಅಂಗ ವೈಕಲ್ಯದಿಂದ ನರಳುವಂತೆ ಮಾಡಿದ ವಿದೇಶೀ ಕಂಪೆನಿಯ ಅಧಿಕಾರಿಗಳನ್ನು ಪಂಚತಾರ ಒಟೇಲುಗಳಲ್ಲಿ ಕುಡಿಸಿ, ಕುಣಿಸಿ ಉಪಚರಿಸಿ ಅವರ ತಾಯ್ನಾಡಿಗೆ ಅತ್ಯಂತ ಸುರಕ್ಷ್ಟಿವಾಗಿ ತಲುಪಿಸಲಿಲ್ಲವೇ ನಾವು? ರೊಚ್ಚಿಗೆದ್ದ ಜನ ಎಲ್ಲಿ ಅವರ ಮೇಲೆ ಹರಿಹಾಯ್ದಾರೋ ಎಂದು ಶ್ವೇತಭವನದ ಆಣತಿಗೆ ವಿಧೇಯರಾಗಿ ನಮ್ಮ ಜನರ ಹಿತಾಸಕ್ತಿಗಳನ್ನು ಕಡೆಗಣಿಸಲಿಲ್ಲವೇ ನಾವು? ಇದೇ ಬಿಳಿ ಚರ್ಮದ ಸೊಗಸು, ಎಂಥವರೂ ಮರುಳಾಗುವರು ಇವರ ಮಾತಿನ ಮೋಡಿಗೆ. ಮರುಳಾಗದಿದ್ದರೆ ಗತಿ ನೆಟ್ಟಗಿರೋಲ್ಲ ಎಂದು ಸೌಮ್ಯವಾದ ಆದರೆ ಗಡುಸಾದ ಎಚ್ಚರಿಕೆ ಕೂಡಾ ಕೊಡಲು ಮರೆಯೋಲ್ಲ ಬಿಳಿ ಮೆದುಳು. environmanetal awareness, greenhouse effect, global warming, ಇವೆಲ್ಲಾ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸೀಮಿತ. ಮೆಕ್ಸಿಕೋ ಕೊಲ್ಲಿಯಲ್ಲಿ ನೀರಿನಡಿಯ ತೈಲ ಬಾವಿಯ ಸೋರಿಕೆಯಿಂದ ಉಂಟಾದ ಅನಾಹುತದಲ್ಲಿ ಪ್ರಕೃತಿಗೆ ಆದ ನಷ್ಟ ಇನ್ನೂ ತಿಳಿದು ಬಂದಿಲ್ಲ. ಕಳಪೆ ದರ್ಜೆಯ ಉಪಕರಣ ಗಳನ್ನು ಉಪಯೋಗಿಸಿದ್ದರಿಂದ ಈ ಅನಾಹುತ ಸಂಭವಿಸಿತು. ಪ್ರತೀ ದಿನ ೫೦೦೦ ಬ್ಯಾರಲ್ ಗಳಷ್ಟು ತೈಲ ಸೋರುತ್ತಿದೆಯಂತೆ. ಆದರೆ ಮತ್ತೊಂದು ವರದಿಯ ಪ್ರಕಾರ ಸೋರುತ್ತಿರುವುದು ೫೦೦೦ ಬ್ಯಾರಲ ಅಲ್ಲ, ಅದಕ್ಕಿಂತ ಹತ್ತು ಪಟ್ಟು.ಹಾಗೂ ಈ ಸೋರಿಕೆ ಮಾಡುತ್ತಿರುವ ಅನಾಹುತವೋ? ಅಂದಾಜಿಗೆ ಸಿಕ್ಕಿಲ್ಲ.  

ತೈಲ ಸೋರಿಕೆಗೆ ಕಾರಣವಾದ BP ಕಂಪೆನಿಯ ಮುಖ್ಯಸ್ಥ ಟೋನಿ ಹೇವರ್ಡ್ ಸಾರ್ವಜನಿಕವಾಗಿ ಅಮೆರಿಕೆಯ ಕಾಂಗ್ರೆಸ್ಸ್ ಎದುರು ಮುಖಭಂಗಿತನಾಗಬೇಕಾಯಿತು. ಕ್ರುದ್ಧರಾದ ಅಮೆರಿಕೆಯ ಸಂಸತ್ ಸದಸ್ಯರ ಎದುರು ಕಡಿಮೆಯೆಂದರೂ ಕೇಳಿದ ಪ್ರಶ್ನೆಗಳಿಗೆ ೬೦ ಸಲ  ನನಗೆ ಗೊತ್ತಿಲ್ಲ ಎಂದು ಉತ್ತರ ನೀಡಿ ಅವರನ್ನು ಮತ್ತಷ್ಟು ಉದ್ರೆಕಿಸಿದ. ಇವನ ನನಗೆ ಗೊತ್ತಿಲ್ಲ ಎಂದು ಹೇಳುವ ಚಾಳಿ ಕೇಳಿದ ಸದಸ್ಯನೋರ್ವ ಕಡೆ ಪಕ್ಷ ಇವತ್ತಿನ ದಿನ ಯಾವುದೆಂದು ತಿಳಿದಿದೆಯಾ ಎಂದು ಮೂದಲಿಸಿದ. ಇದೇ ರೀತಿಯ ಉಪಚಾರವನ್ನು ಭೂಪಾಲ್ ದುರಂತಕ್ಕೆ ಕಾರಣರಾದ ಅಧಿಕಾರಿಗಳಿಗೆ ಅಮೇರಿಕ ನೀಡಿತೇ ಎಂದು ಮಾತ್ರ ದಯಮಾಡಿ ಕೇಳಬೇಡಿ. ವಿಯೆಟ್ನಾಂ ಕದನದ ವೇಳೆ ಅಮಾಯಕರ ಮೇಲೆ agent orange ಎಂಬ ರಸಾಯನಿಕವನ್ನು ಉಪಯೋಗಿಸಿ ಸಾವಿರಾರು ಜನರನ್ನು  ಕೊಂದದ್ದು ಮಾತ್ರವಲ್ಲ ಇಂದಿಗೂ ಅಲ್ಲಿನ ವಾತಾವರಣದ ಮೇಲೆ ಈ ವಿಷಾನಿಲದ ಪ್ರಭಾವ ಕಾಣುತ್ತಿದೆ. ಆದರೆ ತನಗೆ ಬೇಕಾದ ಕಡೆ ಜಾಣ ಕಿವುಡನ್ನು ಪ್ರದರ್ಶಿಸುವ ಅಮೆರಿಕೆಗೆ ದೂರದ ತೋರಾ ಬೊರಾ ಗವಿಯಲ್ಲಿ ಬಿನ್ ಲಾಡೆನ್ ಒಂದಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋದರೆ ಅವನಿಗೆ ಮೂತ್ರಕೋಶದ ಖಾಯಿಲೆ ಇದೆ ಎಂದು ವಿಶ್ವಕ್ಕೆ ಡಂಗುರ ಸಾರಿಸಿ ಹೇಳುತ್ತದೆ. ಅಮೆರಿಕೆಯ ಈ ದ್ವಂದ್ವ ನೀತಿ ಯ ಬಗ್ಗೆ ಒಬ್ಬ ಓದುಗ ಹೇಳಿದ್ದು americans are sanctimonious hypocrites ಎಂದು. ಎಷ್ಟು ಸತ್ಯ ನೋಡಿ ಈ ಮಾತು.   

ಬಿಳಿಯ ಏನು ಮಾಡಿದರೂ ಅದು ಸಲೀಸಾಗಿ ಒಂದೆರಡು, ಛೆ, ಛೆ, ಹಾಗಾಗಬಾರದಿತ್ತು, ಹೀಗಾಗ ಬಾರದಿತ್ತು ಎಂದು ಮರುಕ ಪಟ್ಟು ಯಥಾ ಸ್ಥಿತಿ ತಮ್ಮ ಕಾರುಬಾರನ್ನು ನಡೆಸುವ ಚಾಳಿಗೆ ನಮ್ಮಲ್ಲಿ ಉತ್ತರವಿದೆಯೇ? 

ಚೀನಾದಲ್ಲಿ ಮಕ್ಕಳ ಕುಡಿಯುವ ಹಾಲಿನಲ್ಲಿ ಕಲಬೆರಕೆ ಮಾಡಿದವರಿಗೆ ಮರಣ ದಂಡನೆ, ಇಲ್ಲಿ ಕಡಲನ್ನೇ ಕಲುಷಿತ ಗೊಳಿಸಿದ CEO ಪ್ರವಾಸದಲ್ಲಿ, ಭೋಪಾಲದಲ್ಲಿ ಸಾವಿರಾರು ಜನರ ಸಾವಿಗೆ ಕಾರಣರಾದವರು ನಿಶ್ಚಿಂತರಾಗಿ ತಮ್ಮ ದೇಶದಲ್ಲಿ. ನ್ಯಾಯಕ್ಕೆ ರಾವಣನ ಥರಾ ಹತ್ತು ಅಥವಾ ಹೆಚ್ಚು ತಲೆಗಳು. Receiving end ನಲ್ಲಿರುವವನು ಬಡವನಾದರಂತೂ ತೀರಿತು, ತಲೆಗಳ ಮೇಲೆ ತಲೆಗಳು ನ್ಯಾಯದೇವಿಗೆ.  

ಕೆಳಗಿನ ಚಿತ್ರ ನೋಡಿ.  ಶುಭ್ರ ಬಿಳಿ ಬಣ್ಣದ ಈ ಪಕ್ಷಿ.. ತಿಳಿ ನೀಲಿ ಬಣ್ಣದ ಅಟ್ಲಾಂಟಿಕ್ ಕಡಲಿನ ಹಿನ್ನೀರಿನಲ್ಲಿ ಮುಳುಗೆದ್ದು ಸನತಸ ಪಡುತ್ತಿದ್ದ ಈ ಪಕ್ಷಿ ತನ್ನ ಮೈಯ್ಯನ್ನೆಲ್ಲಾ ಜಿಡ್ಡುಗಟ್ಟಿದ ತೈಲದಿಂದ ಕಡುಗಪ್ಪಾಗಿಸಿಕೊಂಡು, ನಮ್ಮನ್ನು ದೈನ್ಯತೆಯಿಂದ ಕೇಳುತ್ತಿದೆ ಯಾವ ಪಾಪಕ್ಕಾಗಿ ನನಗೀ ಶಿಕ್ಷೆ ಎಂದು?

ಅದಕ್ಕೆ ಉತ್ತರ bank of england ಮತ್ತು ಅಮೆರಿಕೆಯ treasury department ಗಳ ತಿಜೋರಿಗಳಲ್ಲಿ ಕಾಣಲು ಸಿಗಬಹುದು.     

 

ಅಪ್ಪನೊಂದಿಗೆ ಒಂದು ಸಂಜೆ

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದಿಗೆ ಅವರನ್ನು ಕಳಿಸುವ ನಾನು ಇಂದು ಆಫೀಸಿನಿಂದ ಸ್ವಲ್ಪ ಬೇಗ ಬಿಡುವು ಮಾಡಿಕೊಂಡು ಅಪ್ಪನನ್ನೂ ಮತ್ತು ಮಡದಿ ಮಕ್ಕಳ ಸಮೇತ ಮಕ್ಕಾದ ಕಡೆ ಹೊರಟೆ. ಸಂಜೆ ಐದಾದರೂ ಮರುಭೂಮಿಯ ಸೂರ್ಯ ಸುಲಭವಾಗಿ ಇರುಳಿಗೆ ಕೊರಳೊಡ್ಡುವುದಿಲ್ಲ. ಪ್ರಖರತೆ ಸ್ವಲ್ಪ ಜೋರೇ. ತನ್ನ ದಿನಚರಿಯ ಕೊನೆಯಲ್ಲೂ ಪೊಗರು ತೋರಿಸಿಯೇ ವಿರಮಿಸುವುದು. ಡ್ರೈವ್ ಮಾಡುತ್ತಾ ಪಪ್ಪ ರನ್ನು ಮಾತಿಗೆ ಎಳೆದೆ. ಮನೆಯಲ್ಲಿ ಹಿರಿಯರ ಇದೆಂಥಾ ಆಂಗ್ಲ ಸಂಸ್ಕಾರ ಎನ್ನುವ ಪ್ರತಿಭಟನೆಯ ನಡುವೆಯೂ ನಾವು ಅಪ್ಪ ಅಮ್ಮನನ್ನು ಪಪ್ಪ- ಮಮ್ಮಿ ಎಂದು ಕರೆಯುತ್ತೇವೆ. ಇದು ನಮ್ಮ ಚಿಕ್ಕಮ್ಮಂದಿರು ಹಾಕಿದ ಚಾಳಿ. ಹರಟುತ್ತಾ ನಾನು ಡ್ರೈವ್ ಮಾಡುತ್ತಿದ್ದ GMC Yukon ಗಾಡಿಯ ಡ್ಯಾಶ್ ಬೋರ್ಡ್ ೧೪೦ ಕೀ ಮೀ ಮುಳ್ಳನ್ನು ಮುಟ್ಟಿದ್ದನ್ನು ನೋಡಿ ಪಪ್ಪ ತಮ್ಮ ಸಂದು ಹೋದ ಕಾಲದ ಮುಳ್ಳನ್ನು ಹಿಂದಕ್ಕೆ ಓಡಿಸಿ ಸುಂದರ ನೆನಪಿನ ಸುರುಳಿ ಬಿಚ್ಚಿದರು.

ನನ್ನ ತಂದೆ ಕೇರಳದ ಕಾಸರಗೋಡಿನಿಂದ ಸುಮಾರು ೮ ಕೀ.ಮೀ ದೂರದಲ್ಲಿರುವ ಚೇರೂರ್ ಗ್ರಾಮದವರು. ಬದುಕಿನ ಸಂಗಾತಿಯಾಗಿ ಬಂತು ಕಡು ಬಡತನ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಪಪ್ಪ ಮ್ಯಾಟ್ರಿಕ್ ಮುಗಿಸಿದ್ದರು. ನಂತರ ಓದಲು ಹಣದ ಕೊರತೆಯಿಂದ ಶಾಲೆ ಬಿಟ್ಟು ವಿವಿಧ ಧಂಧೆ ಗೆ ಇಳಿದರು. ಚೇರೂರ್ ನ ಗುಡ್ಡದ ತಳದಲ್ಲಿ ಅವರ ಮನೆಯಂತೆ. ತನ್ನ ಅಣ್ಣನ ಸೈಕಲ್ ಅನ್ನು ಗುಡ್ಡದ ಮೇಲೆ ತಲುಪಿಸಬೇಕು ಪಪ್ಪ. ಕಿರಿಯರ ಮೇಲೆ ಹಿರಿಯರ ಸವಾರಿ. ದೂರವೆಲ್ಲಾದರೂ ಹೋಗಬೇಕೆಂದರೆ ಕಾಸರಗೋಡಿನವರೆಗೆ ಸೈಕಲ್ ಅಥವಾ ನಡೆದುಕೊಂಡು ಬಂದು ನಂತರ “ಚಾರ್ಕೋಲ್ ಬಸ್” ಹತ್ತಬೇಕು ಎಂದರು ಪಪ್ಪ. ಚಾರ್ಕೋಲ್ ಬಸ್ಸಾ, ಎಂದು ನಾನು ಅಚ್ಚರಿಯಿಂದ ಕೇಳಿದೆ. ಹೌದು ಕಲ್ಲಿದ್ದಲ ಬಸ್ಸು ಕಣೋ ಆಗಿನ ಕಾಲದಲ್ಲಿ ಎಂದರು ಪಪ್ಪ. ನನಗೆ ನಂಬಲಾಗಲಿಲ್ಲ. ಉಗಿ ಬಂಡಿಯನ್ನು ನೋಡಿ, ಹತ್ತಿ ಪರಿಚಯವಿದ್ದ ನನಗೆ ಕಲ್ಲಿದ್ದಲ ಬಸ್ಸು ವಿಚಿತ್ರವಾಗಿ ತೋರಿತು. ಬಸ್ಸಿನ ಬಾನೆಟ್ ಮೇಲೆ ಒಂದು ತೂತಿರುತ್ತದೆ. ಅದಕ್ಕೆ ಲಿವರ್ ಹಾಕಿ ಕಂಡಕ್ಟರ್ ಜೋರಾಗಿ ತಿರುಗಿಸುತ್ತಾನೆ ಗಿರ್ರ್, ಗಿರ್ರ್ ಅಂತ. ಈ ಗಿರ್ರ್, ಗಿರ್ರೂ, ಕಂಡಕ್ಟರನ ಏದುಸಿರೂ ಸೇರಿ ಬಸ್ಸು ಡುರ್ರ್, ಡುರ್ರ್, ಎಂದು ಸದ್ದು ಮಾಡುತ್ತಾ ಜೀವ ತುಂಬಿಕೊಳ್ಳುತ್ತದೆ. ವಾಹ್ ಎಂಥ ಸುಂದರ ಪ್ರಯಾಣವಾಗಿರಬಹುದು ಕಲ್ಲಿದ್ದಲಿನ ಬಸ್ಸಿನದು. ನನ್ನ ದೊಡ್ಡಪ್ಪ ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ಇನ್ನೂ ಚಿಕ್ಕ ಪ್ರಾಯದ ನನ್ನ ಅಪ್ಪ ಬಂದರು ಅಣ್ಣನ ಸಹಾಯಕ್ಕೆಂದು. ಭದ್ರಾವತಿಯಿಂದ ಕಾಸರಗೋಡಿಗೆ ಪ್ರಯಾಣ ಬೆಳೆಸುವುದು ಚಂದ್ರಯಾನದಂತೆ ಇರಬೇಕು ಎಂದು ತೋರಿತು ನನಗೆ ನನ್ನ ಅಪ್ಪನ ಅನುಭವ ಕೇಳಿ.  ಕೇರಳದಲ್ಲಿ ಅಕ್ಕಿ, ಸಕ್ಕರೆ ಹೀಗೆ ಅವಶ್ಯಕ ವಸ್ತುಗಳ ಅಭಾವವಂತೆ. ಅದರ ಮೇಲೆ ಕಾಳ ಧಂಧೆ ಬೇರೆ. ಮೂರು ಹೊತ್ತಿನ ಊಟ ಬಹಳಷ್ಟು ಜನರಿಗೆ ಅಪರೂಪ. ಬೆಳಿಗ್ಗೆ ತಿಂದರೆ ಮಧ್ಯಾಹ್ನ ಇಲ್ಲ ಕೂಳು. ಮಧ್ಯಾಹ್ನ ತಿಂದರೆ ರಾತ್ರಿ ಉಪವಾಸ. ನನ್ನ ಅಪ್ಪನ ಬಳಿ ನನ್ನ ದೊಡ್ಡಪ್ಪ ೧೦ ಕೆಜಿ ಸಕ್ಕರೆ ಕಳಿಸಿದರು ಊರಿಗೆಂದು. ಶಿವಮೊಗ್ಗದಿಂದ ಆಗುಂಬೆಗೆ ಒಂದು ವ್ಯಾನು ಹಿಡಿಯಬೇಕು. ಆಗುಂಬೆಯಿಂದ ಸೋಮೆಶ್ವರಕ್ಕೆ ಮತ್ತೊಂದು ವ್ಯಾನು. ಸೋಮೇಶ್ವರದಿಂದ ಮಂಗಳೂರಿಗೆ ಮತ್ತೊಂದು ವ್ಯಾನು. ಈ ವ್ಯವಸ್ಥೆ ಏಕೆ ಎಂದರೆ ಘಾಟಿ ಏರಿ ಇಳಿಯಲು ಬಯಲು ಸೀಮೆಯಲ್ಲಿ ಪಳಗಿದ ವಾಹನಗಳಿಗೆ ಸಾಧ್ಯವಿಲ್ಲವಂತೆ. ಒಂದು ರೀತಿಯ ghat specialist ಈ ಆಗುಂಬೆಯಿಂದ ಸೋಮೇಶ್ವರಕ್ಕೆ ಜನರನ್ನು ಕೊಂಡೊಯ್ಯುವ ವಾಹನಗಳು. ಆಗುಂಬೆ ತಲುಪಿದ ನಂತರ ಸೋಮೇಶ್ವರಕ್ಕೆ ಅಂದು ವ್ಯಾನಿಲ್ಲ. ಬೇರೆ ದಾರಿ ಕಾಣದೆ ಸಕ್ಕರೆ ಚೀಲವನ್ನು ಹೊತ್ತು ನಡೆದುಕೊಂಡು ಆಗುಂಬೆ ಇಳಿದು ಬಂದರಂತೆ. ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟು ಕೊಂಡಿದ್ದ ದೊಡ್ಡಪ್ಪ ಎರಡನೇ ವಿಶ್ವ ಯುದ್ಧದ ಸಮಯ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ಯುದ್ಧ ಮುಗಿದ ನಂತರ ಬೇಕಾದರೆ ನಿವೃತ್ತಿ ತೆಗೆದು ಕೊಳ್ಳಬಹುದು ಎಂದು ಸರಕಾರ ಹೇಳಿದಾಗ ನಿವೃತ್ತಿ ತೆಗೆದುಕೊಂಡರಂತೆ. ಇದನ್ನು ಕೇಳಿ ನನಗೆ ರೋಮಾಂಚನ. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ. ಇನ್ನಷ್ಟು ತಿಳಿಯುವಾ ಎಂದರೆ ಆಗ ಅಪ್ಪ ತೀರಾ ಚಿಕ್ಕವರಾಗಿದ್ದರಿಂದ ಹೆಚ್ಚಿನ ವಿವರ ಸಿಗಲಿಲ್ಲ. ದೊಡ್ದಪ್ಪನನ್ನೇ ಕೇಳೋಣ ಎಂದರೆ ಅವರು ನಿಧನರಾಗಿ ೧೮ ವರ್ಷಗಳು.  

ಆಗಿನ ಕಾಲದಲ್ಲಿ ಕೆಲವರು ಹೆಚ್ಚಿನ ಸಂಪಾದನೆಗಾಗಿ ಮಲೇಷ್ಯಾ, ಶ್ರೀಲಂಕೆಗೆ ಹೋಗುತ್ತಿದ್ದರಂತೆ. ಮತ್ತೊಬ್ಬ ದೊಡ್ಡಪ್ಪ ಶ್ರೀಲಂಕೆಯಲ್ಲಿ ಇದ್ದರು. ಅವರ ಸಂಬಳ ತಿಂಗಳಿಗೆ ೫೦ ರೂಪಾಯಿ. ಸುಮಾರು ಅರವತ್ತು ವರ್ಷಗಳ ಹಿಂದೆ ಅದು ದೊಡ್ಡ ಮೊತ್ತ. ದೊಡ್ಡಪ್ಪ ಹಣ ಹೇಗೆ ಕಳಿಸುತ್ತಿದ್ದರು ಎಂದು ನಾನು ಕೇಳಿದಾಗ ಪೋಸ್ಟ್ ಮ್ಯಾನ್ ತರುತ್ತಿದ್ದ ಎಂದು ಉತ್ತರಿಸಿದ ಅಪ್ಪ ಮತ್ತೊಂದು ಸ್ವಾರಸ್ಯವನ್ನು ಹೇಳಿದರು. ಪೋಸ್ಟ್ ಮ್ಯಾನ್ ಬಂದ ಎಂದು ಜನರಿಗೆ ತಿಳಿಯುವುದು ಘಂಟೆಯ ಸದ್ದು ಕೇಳಿದಾಗಲಂತೆ. ಹೆಗಲ ಮೇಲೆ ಒಂದು ದೊಣ್ಣೆ, ಅದಕ್ಕೆ ಒಂದು ಘಂಟೆ ಸಿಕ್ಕಿಸಿ ಘಂಟೆ ಬಾರಿಸುತ್ತಾ ಬರುತ್ತಾನಂತೆ ಅಂಚೆಯವ ಕಾಸು ಕಾಗದ ವಿತರಿಸಲು. oh, how much I miss that rustic life. ಈಗಿನ ಕಾಲದ ಈ ಮೇಲು, ಸ್ಪ್ಯಾಮು, ಕ್ರೆಡಿಟ್ ಕಾರ್ಡ್ ಸ್ಕ್ಯಾಮು ಮತ್ತು ಆಗಿನ ಕಾಲದ ಘಂಟೆಯ ನಿನಾದ.

ಪಪ್ಪ ಇಷ್ಟು ಹೇಳಿ ಮುಗಿಸುತ್ತಿದ್ದಂತೆ ಮೇಲೆಲ್ಲಾ ಥಳಕು, ಒಳಗೆಲ್ಲಾ ಟೊಳಕನ್ನು ಇಟ್ಟುಕೊಂಡು ನಮ್ಮನ್ನು ಮರುಳು ಮಾಡುತಿರುವ ಆಧುನಿಕತೆ ಬಿಂಬಿಸುವ  ಗಗನ ಚುಂಬಿ ಕಟ್ಟಡಗಳು ಭವ್ಯವಾದ ಮಕ್ಕಾ ಮಸ್ಜಿದ್ ನ ನೀಳ ಗೋಪುರಗಳನ್ನು ಕುಬ್ಜವಾಗಿಸುವ ದೃಶ್ಯ ಗೋಚರಿಸಿ ಕಾರನ್ನು ಪಾರ್ಕಿಂಗ್ ಲಾಟ್ ನತ್ತ ತಿರುಗಿಸಿದೆ ಹಳೆ ಕಾಲದ ಗುಂಗಿನಲ್ಲಿ.            

ವಯಸ್ಸಾದವರೊಂದಿಗೆ ಮಾತನಾಡುತ್ತಿದ್ದರೆ ಕೆಲವರು ಹಳೆ ತಲೆಯವನ ಜೊತೆ ಏನ್ ಕೆಲಸ ನಡಿ ಎಂದು ಗದರಿಸಿ ಎಬ್ಬಿಸುವುದಿದೆ. ನನ್ನ ಪಾಲಿಗೆ ಹಿರಿಯರು ಮನೆಗೆ ಕಿರೀಟವಿದ್ದಂತೆ. ವಯಸ್ಸಾದವರೊಂದಿಗೆ ಸಮಯ ಕಳೆಯಲು ನನಗೆ ಬೇಸರ ಎನ್ನಿಸುವುದಿಲ್ಲ. ಮುಪ್ಪು ಏನು, ಹಾಗೂ ಆ ಮುಪ್ಪಿನ ಹಿಂದೆ ಇರುವ ಅನುಭವವನ್ನು ಸವಿಯಬೇಕೆಂದರೆ ವಯಸ್ಸಾದವರೊಂದಿಗೆ ಕಾಲ ಕಳೆಯವೇಕು. ಬದುಕಿನ ಸುವರ್ಣ ಕಾಲವನ್ನು, ಪ್ರೀತಿ, ನಿಸ್ವಾರ್ಥತೆ, ಸಹನೆ, ಸರಳತೆಯಿಂದ ಕೂಡಿದ ಬದುಕನ್ನು ಕಂಡ “ಮುದಿ ತಲೆಗಳು” ತಮ್ಮ ತಲೆಯ ಮೇಲಿನ ಕೂದಲು ಬೆಳ್ಳಿ ವರ್ಣಕ್ಕೆ ತಿರುಗಿದ ಕೂಡಲೇ ಸಮಾಜಕ್ಕೆ ಹೊರೆಯಾಗಿ ಬಿಡುವುದು ಖೇದಕರ. ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಹಿರಿಯರಿದ್ದಾರೆ ಅವರನ್ನು ಕಂಡು ಮಾತನಾಡಿಸಿ, ಏಕತ ಕಪೂರಳ ಸುಳ್ಳಿನ ಸರಮಾಲೆಯ ಸೀರಿಯಲ್ಲುಗಳಿಗಿಂತ ಸ್ವಾರಸ್ಯಕರ ಇವರು ಬದುಕಿದ ಬದುಕು. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ ಸೇವೆ ಸಲ್ಲಿಸಿದ್ದರು ಎಂದು ನನಗೆ ತಿಳಿದದ್ದು ಅವರು ಸತ್ತು ಹದಿನೆಂಟು ವರುಷಗಳ ನಂತರ, ಅದೇ ರೀತಿ ಸುಮಾರು ಅರವತ್ತು ವರುಷಗಳ ಮೊದಲು ಮೆಟ್ರಿಕ್ ಕಲಿತಿದ್ದ ನನ್ನ ಅಜ್ಜಿ ಸಹಾ ಕಳೆದ ವರುಷ ತೀರಿಕೊಂಡರು. ಇವರಿಬ್ಬರಿಂದ ನನಗೆ ತಿಳಿಯುವುದು ಬಹಳಷ್ಟಿತ್ತು, ಆದರೆ ಆಧುನಿಕ ಬದುಕಿನ ಬ್ಯಾನೆ ಆ ಅವಕಾಶವನ್ನು ನಿರಾಕರಿಸಿತು.   

ಕಲ್ಲಿದ್ದಲ ಬಸ್ಸಿನ ಬಗ್ಗೆ ಮತ್ತಷ್ಟು: ಕಲ್ಲಿದ್ದಲ ಬಸ್ಸುಗಳು ೧೯೫೦ ರವರೆಗೂ ಚೈನಾದಲ್ಲಿ ಉಪಯೋಗದಲ್ಲಿದ್ದವು ಮತ್ತು ಈಗಲೂ ಉತ್ತರ ಕೊರಿಯಾದಲ್ಲಿ ಕಲ್ಲಿದ್ದಲ ಬಸ್ಸುಗಳು ಓಡಾಡುತ್ತಿವೆ. ಎರಡನೇ ವಿಶ್ವ ಯುದ್ಧದ ನಂತರವೂ ಜಪಾನಿನಲ್ಲಿ ಇಂಥ ಬಸ್ಸುಗಳು ಓಡಾಡುತ್ತಿದ್ದವು. ೧೯೩೧ ರಲ್ಲಿ Tang Zhongming  ಕಲ್ಲಿದ್ದಲಿನಿಂದ ಓಡಾಡುವ ವಾಹನವನ್ನು ಚಲಾವಣೆಗೆ ತಂದನು.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ

ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು ದುಸ್ತರ, ದುರ್ಭರವಾದಾಗ ಯಾವ ಉಪದೇಶವೂ ಕೆಲಸಕ್ಕೆ ಬಾರದು. ಕೆಲವರು ವಿಷ ಸೇವಿಸಿ ಬದುಕಿಗೆ ಬೈ ಹೇಳಿದರೆ ಇನ್ನೂ ಕೆಲವರು ರೈಲು, ಹಗ್ಗ ಹೀಗೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಎತ್ತರದ ಬಂಡೆ ಅಥವಾ ಕಣಿವೆಯ ತುದಿಯ ಮೇಲಿನಿಂದ ಜಿಗಿದು ಪ್ರಾಣ ಕಳೆದು ಕೊಳ್ಳುತ್ತಾರೆ. ಇಂಥ “ಸಾವಿನ  ತಾಣ” ಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ನಿರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ಹತ್ತಾರು ವರ್ಷಗಳಿಂದ ದಿನ ಕಳೆಯುತ್ತಾನೆ. ಜನ ಕೆಳಕ್ಕೆ ಜಿಗಿದು ತಲೆ ಒಡೆದುಕೊಂಡು ಚೀರಿಡುತ್ತಾ ಸಾಯುವುದನ್ನು ನೋಡಿ ಆಸ್ವಾದಿಸಲು ಅಲ್ಲ. ಆತನ ಉದ್ದೇಶ ಬೇರೆಯೇ.

೮೪ ವರ್ಷ ಪ್ರಾಯದ ರಿಚೀ ಯಮನಿಗೆ ಪ್ರಿಯವಾದ ತಾಣಗಳಲ್ಲಿ ಕಾಲ ಕಳೆಯುತ್ತಾ ಯಮನ ಗಿರಾಕಿಗಳನ್ನು ತನ್ನೆಡೆ ಎಳೆದುಕೊಂಡು ಜೀವ ಉಳಿಸಿದ್ದು ಇದುವರೆಗೂ ಹೆಚ್ಚೂ ಕಡಿಮೆ ೧೬೦ ಜನರನ್ನು. ಯಮಧರ್ಮ ರಾಯನ ವ್ಯಾಪಾರ ಸಾವಾದರೆ ಈತನ ವ್ಯಾಪಾರ ಬದುಕಿನತ್ತ ಮತ್ತೊಂದು ನೋಟ ಹರಿಸಿ ಎರಡನೇ ಇನ್ನಿಂಗ್ಸ್ ಗೆ ಅವಕಾಶ ಮಾಡಿ ಕೊಡುವುದು. ಆಸ್ಟ್ರೇಲಿಯಾದ ಈ ಮಹಾತ್ಮ ತನ್ನ ೫೦ ವರ್ಷಗಳ ಈ “ಆತ್ಮ” ಸೇವೆಗೆ ತನ್ನನ್ನು ಮುಡಿಪಾಗಿರಿಸಿಕೊಂಡು ಸಮಾಜದ ಪ್ರಶಂಸೆಗೆ ಕಾರಣವಾಗಿರುವುದು ಅಚ್ಚರಿಯೇನಲ್ಲ ಅಲ್ಲವೇ? “the gap” ಎಂದು ಕರೆಯಲ್ಪಡುವ ಈ ಆತ್ಮಹತ್ಯೆಯ ಸ್ಪಾಟ್ ಇರುವುದು ಸಿಡ್ನಿ ಬಂದರು ಪ್ರದೇಶದಲ್ಲಿ. ಈ ಇಳಿ ಪ್ರಾಯದವನಿಗಾಗಿ ಯಮ ಅವನ ಮನೆ ತಡಕಾಡುತ್ತಿ ದ್ದರೆ ಈತ ಈ ದುರ್ಗಮ ಸ್ಥಳಕ್ಕೆ ಬಂದು ಜೀವನ ಶೂನ್ಯ ಎನ್ನುವವರಿಗೆ ಊರುಗೋಲಾಗಿ ನಿಲ್ಲುತ್ತಾನೆ. ಮೇಲೆ ಹೇಳಿದ ಕಣಿವೆಯ ತುದಿಗೆ ಬಂದು ಇನ್ನೇನು ಕೆಳಕ್ಕೆ ಹಾರಿ  ಪ್ರಾಣ ಕಳೆದುಕೊಳ್ಳ ಬೇಕು ಎನ್ನುವವರಿಗೆ ಇದ್ದಕ್ಕಿದ್ದಂತೆ ಅಶರೀರ ವಾಣಿಯಂತೆ ಸೌಮ್ಯವಾದ, ಸ್ನೇಹಮಯವಾದ ಸ್ವರ ಕೇಳಿಬರುತ್ತದೆ; “ಒಂದು ಲೋಟ ಚಹಾ ಗಾಗಿ ನನ್ನಲ್ಲಿಗೆ ಬರಬಾರದೇ?” ಇದೇ ಆ ವಾಣಿ. ಪಕ್ಕದ ಸಾಗರದ ಸೌಮ್ಯ ಅಲೆಗಳು ರಿಚಿ ಯ ಸೌಮ್ಯವಾದ ಮಾತುಗಳನ್ನ ಸಾಯ ಬೇಕೆನ್ನುವವರ ಕಿವಿಗಳನ್ನು ತಲುಪಿಸಿ ಒಂದು ಕ್ಷಣ ತಬ್ಬಿಬ್ಬಾಗಿಸುತ್ತದೆ.  ಸಾವಿನಂಗಡಿಯ ಹೊಸ್ತಿಲಿನಲ್ಲಿ ನಿಂತ ವ್ಯಕ್ತಿಗೆ ಮತ್ತೊಮ್ಮೆ ಇದೇ ವಾಣಿ ಕೇಳಿಬರುತ್ತದೆ. why dont you come and have a cup of tea? ಓಹ್, ಇದುವರೆಗೂ ಯಾರೂ ಕೇಳಿರಲಿಲ್ಲ ಹೀಗೆ. ರೈಲು ನಿಲ್ದಾಣಗಳಲ್ಲೂ, ಇತರೆ ಸಾರ್ವಜನಿಕ ಸ್ಥಳಗಳಲ್ಲೂ ತಲೆಯನ್ನು ಕೈಯ್ಯಲ್ಲಿ ಹೊತ್ತು ಗಳಗಳ ಅಳುತ್ತಾ ಕೂತರೂ, ವ್ಯವಹಾರದ ಮತ್ತು ಇನ್ನಿತರ ಕೆಲಸ ನಿಮಿತ್ತ ಗಡಿ ಬಿಡಿಯಲ್ಲಿ ಓಡಾಡುವ ಸಾವಿರಾರು ಜನರನ್ನು ತಾನು ದೀನ ನೋಟದಿಂದ ನೋಡಿದರೂ ಅಲಕ್ಷಿಸಿ ಮುನ್ನಡೆವ ಈ ಜಗತ್ತಿನಲ್ಲಿ ಈ ತೆರನಾದ ಕೋರಿಕೆ? why dont you come and have a cup of tea? ಒಂದು ಕಪ್ ಚಹಾಕ್ಕೆ ಯಾಕೆ ಬರಬಾರದು? ಈ ವಾಣಿ ಬಂದ ಕಡೆ ತಿರುಗಿ ನೋಡಿದಾಗ ಸ್ನೇಹಮಯಿ ನಿಂತಿದ್ದಾನೆ, ತನ್ನ ಸುಕ್ಕುಗಟ್ಟಿದ ಕೈಗಳ ತುಂಬಾ ಬದುಕಿನ ಭರವಸೆಗಳನ್ನು ಇಟ್ಟುಕೊಂಡು. ರಿಚಿಯ ನಿಷ್ಕಳಂಕ ಸುಕ್ಕಿಲ್ಲದ ನಗು ಅವರ ಕೈಗಳಿಂದ ಸಾವಿನ ಅಸ್ತ್ರ ಕಳೆದು ಕೊಳ್ಳುವಂತೆ ಮಾಡುತ್ತದೆ. ಹೌದು ಕೆಲವೊಮ್ಮೆ ಒಂದು ಸರಳ, ಸ್ವಚ್ಚ ನಗು ಮಾಂತ್ರಿಕ ಶಕ್ತಿಯನ್ನೂ ಹೊಂದಿರುತ್ತದೆ. ಎಮ್ಮೆಯ ಮೇಲೆ ಕೂತು ಮೀಸೆ ತಿರುವುತ್ತಾ ಆಸೆಗಣ್ಣುಗಳಿಂದ ಗಿರಾಕಿಯ ನಿರೀಕ್ಷೆಯಲ್ಲಿ ಜವರಾಯ ಕೂತಿದ್ದರೆ ತನ್ನ ಹಸಿರು ಬಣ್ಣದ ತೊಗಲು ಕುರ್ಚಿಯಲ್ಲಿ ರಿಚಿ ಕೂತಿರುತ್ತಾನೆ, ಗಾಳ ಹಿಡಿದು. ಬದುಕಿನ, ಭರವಸೆಯ, ನಿರೀಕ್ಷೆಗಳ, ಹೊಂಗನುಸುಗಳ ಗಾಳ ಹಿಡಿದು. ಆತ ಹೇಳುವುದು, “ಅವರನ್ನು ಉಳಿಸಲೇಬೇಕು, ಇದು ಸುಲಭ ಸಾಧ್ಯ” ಎಂದು.its pretty simple ಈತನ ಪಾಲಿಗೆ. ಅದು ನಿಜವೂ ಕೂಡಾ.

೧೮ ನೇ ಶತಮಾನದಿಂದ ಇಲ್ಲಿಗೆ ಬರುತ್ತಿದ್ದಾರಂತೆ ಜನರು ಸಾವನ್ನು ಅರಸುತ್ತಾ. ವಾರಕ್ಕೊಂದರಂತೆ ಸಾವನ್ನು ಕಾಣುತ್ತಿರುವ ಈ ಸ್ಥಳವನ್ನು ಜನರಿಂದ ದೂರ ಇಡಲು ಸರಕಾರ ದೊಡ್ಡ ಮೊತ್ತದ ಹಣವನ್ನೂ ವ್ಯಯಿಸುತ್ತಿದೆಯಂತೆ.

ಯಾರಾದರೂ ಈ ಸಾವಿನ ಕಣಿವೆಯ ತುದಿಗೆ ಬಂದು ನಿಂತರೂ ಹತ್ತಿರದಲ್ಲೇ ಇರುವ ತನ್ನ ಮನೆಯಿಂದ ಧಾವಿಸುವ ಈತ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಈತನ ನಯವಾದ ಮಾತಿಗೆ ಮರುಳಾಗಿ ತಮ್ಮ ಬದುಕಿಗೆ ಮತ್ತೊಮ್ಮೆ “ಹಾಯ್” ಹೇಳಲು ಮರಳಿದವರೂ ಇದ್ದಾರೆ. ಒಮ್ಮೆ ಊರುಗೋಲಿನ (crutches) ಸಹಾಯದಿಂದ ಬಂದ ವ್ಯಕ್ತಿ ಯೊಬ್ಬ ತುದಿಯಲ್ಲಿ ನಿಂತಿದ್ದನ್ನು ಕಂಡ ರಿಚಿ ಅಲ್ಲಿಗೆ ಧಾವಿಸುತ್ತಾನೆ, ಆದರೆ ಅವನು ಅಲ್ಲಿಗೆ ತಲುಪುವಷ್ಟರಲ್ಲಿ ಆ ವ್ಯಕ್ತಿ ತನ್ನ ಊರುಗೋಲನ್ನು ತನ್ನ ಬದುಕನ್ನು ದುಸ್ತರವಾಗಿಸಿದ ಲೋಕಕ್ಕೆ ಕಾಣಿಕೆಯಾಗಿ ಬಿಟ್ಟು ಪ್ರಪಾತಕ್ಕೆ ಜಿಗಿದಿರುತ್ತಾನೆ.        

ಈ ರೀತಿಯ ಸೇವೆ ರಿಚಿಗೆ ಇಳಿ ವಯಸ್ಸಿನಲ್ಲಿ ಸಿಕ್ಕಿದ್ದಲ್ಲ. ಯೌವ್ವನದಿಂದಲೇ ಈತ ಜನರನ್ನು ಸಾವಿನಂಚಿನಿಂದ ದೂರ ಇಡಲು ಪ್ರಯತ್ನಿಸುತ್ತಿದ್ದ. ಕೆಲವೊಮ್ಮೆ ಜನರನ್ನು ಅವರ ಅಂತ್ಯದಿಂದ ರಕ್ಷಿಸಲು ಹೋಗಿ ತನ್ನ ಜೀವವನ್ನೂ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ ಸಹ ಈ ಮಹಾತ್ಮ. ನೋವು, ಹಿಂಸೆ, ಅಸಮಾನತೆ ಕಂಡು ರೋಸಿದ ವಿಶ್ವಕ್ಕೆ ರಿಚಿ ಯಂಥ ವ್ಯಕ್ತಿಗಳು ಹೊಂಗಿರಣದಂತೆ ಕಂಗೊಳಿಸುತ್ತಾರೆ.

ಚುಂಬನ ಸ್ಪರ್ದೆ

ಚುಂಬನ ಸ್ಪರ್ದೆ ಚೀನಾದಲ್ಲಿ. ಹಾಂ? ಚುಂಬನ?ಚೀನಾದಲ್ಲಿ? ಅದೂ ಸಾರ್ವಜನಿಕವಾಗಿ? ನಾವೆಲ್ಲಾ ತಿಳಿದಂತೆ ಚೀನೀಯರ ಕೆಲಸ ನಮ್ಮ ಅರುಣಾಚಲ ಪ್ರದೇಶವನ್ನು, ಮತ್ತು ಇತರೆ ಈಶಾನ್ಯ ರಾಜ್ಯಗಳತ್ತ ಆಸೆ ಗಣ್ಣು ಬೀರುವುದು ಎಂದು. ಊಹೂಂ, ಈ ಚಪ್ಪಟೆ ಮೂಗಿನವರಿಗೆ ಒಂದಿಷ್ಟು ಚುಂಬನದ ಕಲೆಯೂ ಗೊತ್ತು, ಯಾರಿಗೆ ಗೊತ್ತು ನಮ್ಮ ವಾತ್ಸ್ಯಾಯನ ಅಡ್ಡಾಡುತ್ತಾ ಚೀನದ ಕಡೆಗೂ ತಲೆ ಹಾಕಿರಬಹುದು. valentine ದಿನದಂದು ಚೀನಾ ದ ಸೂಪರ್ ಮಾರ್ಕೆಟ್ ಒಂದು ವಿವಿಧ ಭಂಗಿಯಲ್ಲಿ ದೀರ್ಘವಾಗಿ ಚುಂಬಿಸುವುದಕ್ಕೆ ಯುವ ಹೃದಯಿಗಳಿಗೆ ಮುಕ್ತ ಆಹ್ವಾನ ನೀಡಿದಾಗ ಸಿಕ್ಕ ಚಿತ್ರಗಳಿವು. ನೋಡಿ ಆನಂದಿಸಿ, ಪೂರ್ಣ ವಿರಾಮ. ಪ್ರಿಯ/ತಮೆ ಯರ ಮೇಲೆ ಪ್ರಯೋಗಿಸದಿರಿ.

ನಲವತ್ತು ಸಂವತ್ಸರಗಳು, ಒಂದು ವಿಚ್ಛೇದನ

ನಲವತ್ತು ವಸಂತಗಳು, ಎಂಥ ಮೊಂಡು ಮರವನ್ನೂ ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊಸ ಅನುಭೂತಿಯನ್ನು ತರುತ್ತದೆ ಮನುಷ್ಯನಲ್ಲಿ. ನಲವತ್ತು ವರುಷಗಳ ಅನುಭವ ಮನುಷ್ಯನನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಾಲ್ಕು ದಶಕಗಳು….ಅವುಗಳ ಬಗ್ಗೆ ಊಹಿಸುವುದೂ ಕಷ್ಟ.

ನಲವತ್ತು ವರುಷಗಳ ಕಾಲ ತೀರಾ ಹತ್ತಿರವಾಗಿದ್ದವರು, ಸಾವಿರಾರು ಹಗಲನ್ನೂ, ಇರುಳನ್ನೂ ಕಂಡವರು ಏಕಾಏಕಿ ದೂರವಾದರು, ಅಮೆರಿಕೆಯಲ್ಲಿ.  

ಅಮೆರಿಕೆಯ ಮಾಜಿ ಅಧ್ಯಕ್ಷ ಅಲ್-ಗೋರ್ ತಮ್ಮ ಪತ್ನಿ ಮೇರಿ ಎಲಿಜಬೆತ್ ಟಿಪ್ಪರ್ ರಿಂದ  ವಿಚ್ಚೇದಿತರಾಗುತ್ತಿದ್ದಾರೆ.   ನಲವತ್ತು ವರ್ಷಗಳ ಬಾಳ ಸಂಗಾತಿಯನ್ನು ತೊರೆದು ನಿಸರ್ಗದ ಏಕಾಂತದ ಅನುಭವಕ್ಕಾಗೋ ಏನೋ. ವಿವಾಹ ಮತ್ತು ವಿಚ್ಚೇದನ ಜನರಿಗೆ ಅತಿ ವೈಯಕ್ತಿಕ ವಿಷಯ. ಅದರ ಚರ್ಚೆ ನಮಗೇಕೆ ಎಂದು ನಿಮಗೆ ಅನ್ನಿಸಬಹುದು. ಆದರೆ ಇಲ್ಲಿ ಕಾಣ ಸಿಕ್ಕಿರುವ ಪಾತ್ರಗಳು ಸಾರ್ವಜನಿಕ ಬದುಕಿನಲ್ಲಿರುವವರು. ಇಂಥವರ ಬೇರೆಲ್ಲಾ ಲೀಲೆಗಳನ್ನೂ ಚರ್ಚಿಸುವ ನಾವು ಅವರ ಸಂಕಷ್ಟಗಳ ಬಗ್ಗೆಯೂ ಯೋಚಿಸಿ ಅದರಲ್ಲಿ ನಮಗೇನಿದೆ ಕಲಿಯಲು ಎಂದು ಸೂಕ್ಷ್ಮವಾಗಿ ನೋಡಿದಾಗ ಅರಿವಾಗುತ್ತದೆ ಈ ವಿಷಯ ನಮಗೆ ಪ್ರಸ್ತುತ ಎಂದು.     

“Everyone you meet is fighting some kind of battle.” – ಎಷ್ಟು ಸತ್ಯ ನೋಡಿ ಈ ಮಾತು. “ನಾವು ಭೆಟ್ಟಿಯಾಗುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದ ಸೆಣಸಿನಲ್ಲಿರುತ್ತಾರೆ”- ಹೌದು ಒಂದಲ್ಲ ಒಂದು ರೀತಿಯ ಹೋರಾಟ ಪ್ರತಿಯೊಬ್ಬರದೂ. ನಲವತ್ತು ವರುಷಗಳ ಸಂಬಂಧ ಈ ರೀತಿ ಕಳಚಿ ಕೊಂಡು ಬಿದ್ದರೆ ಅನಂತತೆಯ ಮಾತು ದೂರ ಉಳಿಯಿತು. ಹಾಗಾದರೆ ವಿವಾಹ ಸಂಬಂಧ ನಿರಂತರ, ಶಾಶ್ವತ (ಸಾವನ್ನು ಬಿಟ್ಟು) ವಾಗಿರಿಸಲು ಸಾಧ್ಯವಿಲ್ಲವೇ? ಕೆಲವರು ಹೇಳ್ತಾರೆ time is a great healer ಅಂತ. ಆದರೆ ಇಲ್ಲಿ ಆ ಹೀಲಿಂಗ್ ಕಾಣ್ತಾ ಇಲ್ಲ. ಇಲ್ಲಿ ಕಾಣ್ತಾ ಇರೋದು drifting. ಅಬ್ಬರದ ಅಲೆಗೆ ನಲುಗುವ ದೋಣಿಯಂತೆ. ವೈಯಕ್ತಿಕ ಬದುಕಿನ ಚರ್ಚೆ ನಮಗೆ ಬೇಡವೆಂದರೂ ಈ ತೆರನಾದ ಸುದ್ದಿಗಳು ನಮ್ಮನ್ನು ಖಂಡಿತ ಗಲಿಬಿಲಿಗೊಳಿಸುತ್ತವೆ. ವಿಶ್ವದ ತಾಪ ಮಾನ ಹೆಚ್ಚಳದ ಬಗ್ಗೆ ಪುಸ್ತಕ ಬರೆದು, ನೊಬೆಲ್ ಗಿಟ್ಟಿಸಿಕೊಂಡ ವ್ಯಕ್ತಿ ತನ್ನ ಮಗ್ಗುಲಲ್ಲೇ ಇದ್ದ ವ್ಯಕ್ತಿಯನ್ನು ಅರಿಯದಾದನೆ? ಹವಾಮಾನ ಬಿಕ್ಕಟ್ಟು (climate crisis), ಅಲ್-ಗೋರ್ ಅವರ ಧ್ಯೇಯ, ಆದರೆ ಮನೆಯೊಳಗಿನ ಹವಾಮಾನ ತಣ್ಣಗೆ ಕೈ ಕೊಡುತ್ತಿದ್ದನ್ನು ಕಾಣದೆ ಎಡವಿದರು ಅಮೆರಿಕೆಯ  ಮಾಜಿ ಉಪಾಧ್ಯಕ್ಷರು. ಹವಾಮಾನದ ಏರು ಪೇರಿನ ಮೇಲೆ ಬಹಳಷ್ಟು ಅಧ್ಯಯನ ನಡೆಸಿದ್ದ ಅಲ್-ಗೋರ್ ಒಂದು ಪುಸ್ತಕ ಸಹ ಬರೆದಿದ್ದರು. ಅದರ ಹೆಸರು An Inconvenient Truth. ಈ ಶೀರ್ಷಿಕೆ ಹವಾಮಾನಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿಗೂ ಅನ್ವಯಿಸಬಹುದು ಎಂದು ಬಹುಶಃ ಅವರಿಗೆ ತಿಳಿದಿರಲಿಲ್ಲವೇನೋ? ಅವರ ಇತ್ತೀಚಿನ ಪುಸ್ತಕದ ಹೆಸರು The Assault on Reason. ಶೀರ್ಷಿಕೆಗಳನ್ನು ಗಮನಿಸಿದಿರಿ ತಾನೇ?    

Familiarity breeds contempt ಎನ್ನುತ್ತಾರೆ. ಆದರೆ ಈ ವಿವಾಹದ ಸಲುಗೆಯ ಬೆಸುಗೆ ಸಡಿಲವಾಗಿ ಕಳಚಿ ಬೀಳಲು ತೆಗೆದುಕೊಂಡವು ಪೂರ್ತಿ ನಲವತ್ತು ವರ್ಷಗಳು. ಅಷ್ಟಕ್ಕೂ ವಿವಾಹದಲ್ಲಿ ಇರಬಾರದ ಸಲುಗೆ ಬೇರೆಲ್ಲಿ ಸಿಗಬಹುದು ಹೇಳಿ? all is fair in love and war ಅಲ್ವಾ? ಒಂದು ಜೋಡಿ ಗೃಹಸ್ಥಾಶ್ರಮಕ್ಕೆ ಮಧುರ ಭಾವನೆಗಳನ್ನು, ಹೊಂಗನಸುಗಳನ್ನು ಇಟ್ಟುಕೊಂಡು ಪ್ರವೇಶಿಸುತ್ತದೆ. ತನ್ನ ಹಿರಿಯರು, ಪೂರ್ವಜರು ಆರಿಸಿಕೊಂಡ ದಾರಿಯನ್ನೇ ಕ್ರಮಿಸಲು ಹೊರಡುವ ಜೋಡಿಗೆ ಆರಂಭದ ಪ್ರೇಮದ ಹುಚ್ಚು ಹೊಳೆ ಈಜಿ ದಡ ಸೇರಿದ ನಂತರ ಒಂದೊಂದೇ ಮುಳ್ಳುಗಳು ಕಾಣಲು, ಪೀಡಿಸಲು ತೊಡಗುತ್ತವೆ. ಆದರೆ ತಮ್ಮ ಪೂರ್ವಜರ ನಿರೀಕ್ಷೆ, ಮಿತಿ ಅರಿತು ಕೊಂಡ, ಜೋಡಿ ಅವನ್ನು ಹೇಗೆ ತನ್ನ ಪೂರ್ವಜರು ನಿಭಾಯಿಸಿದರು ಕಂಡುಕೊಂಡ ಜೋಡಿಗೆ ಸಂಕಷ್ಟಗಳು ತೋರದು. ತೋರಿದರೂ ಅದೂ ಬದುಕಿನ ಅವಿಭಾಜ್ಯ ಅಂಗ ಎಂದು ಕೊಂಡು ತಮ್ಮ ಅಪ್ಪುಗೆಯಲ್ಲಿ ತೊಡಕುಗಳನ್ನೂ ಸೇರಿಸಿಕೊಂಡು ಮುನ್ನಡೆಯುತ್ತಾರೆ. ಅದರಲ್ಲೂ ಆ ವೈವಾಹಿಕ ಬದುಕು ಒಂದೆರಡು, ಮೂರು ಮೊಗ್ಗುಗಳನ್ನು ನೀಡಿದರಂತೂ ಅವರ ಲಾಲನೆ ಪಾಲನೆಯಲ್ಲೂ, ತಮಗಾಗಿ ಅಲ್ಲದಿದ್ದರೂ ತಮ್ಮ ಮಕ್ಕಳಿ ಗಾಗಿಯಾದರೂ ಸಂಬಂಧವನ್ನೂ ಖಾಯಂ ಆಗಿ ಇರಿಸಲು ಪಣ ತೊಡುತ್ತಾರೆ.      

ಅಲ್-ಗೋರ್ ಅವರದು ವಿಶಿಷ್ಟ ವ್ಯಕ್ತಿತ್ವ. ಅಲ್-ಗೋರ್ ಅವರಿಗೆ ಹಿನ್ನಡೆ ಮತ್ತು ಪೆಟ್ಟುಗಳು ಹೊಸತಲ್ಲ. ಇಂಥ ಮತ್ತೊಂದು ಮರ್ಮಾಘಾತ ಅವರಿಗೆ ರಾಜಕೀಯ ಜೀವನದಲ್ಲಿ ಸಿಕ್ಕಿತ್ತು. ೨೦೦೧, ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ. ಜಾರ್ಜ್ ಬುಶ್ ಎದುರಿಗೆ ಸೆಣಸಲು ಡೆಮೊಕ್ರಾಟಿಕ್ ಪಕ್ಷ ಅಲ್-ಗೋರ್ ಅವರನ್ನು ಆರಿಸಿತು. ಪರಸ್ಪರ ಕೆಸರೆರೆಚಾಟ ಜೋರಾಗಿ ನಡೆದು ಅಲ್-ಗೋರ್ ಗೆಲ್ಲಬಹುದು ಎಂದು ಅಮೇರಿಕಾ ಮತ್ತು ವಿಶ್ವ ಭಾವಿಸಿತು. ಮತಗಣನೆ ಪೂರ್ತಿಯಾದ ಕೂಡಲೇ ನಾನು ಸೋತೆ, ಅಭಿನಂದನೆಗಳು ಎಂದು ಬುಶ್ ತನ್ನ ಪ್ರತಿಸ್ಪರ್ದಿ ಗೋರ್ ಅವರಿಗೆ ಫೋನಾಯಿಸಿ ಶುಭ ಕೋರುತ್ತಾರೆ. ಆದರೆ ಮಾರನೆ ದಿನ ಎಣಿಕೆಯಲ್ಲಿ ಎಡವತ್ತಾಗಿದ್ದನ್ನು ಅರಿತ ಬುಶ್ ಪ್ಲೇಟ್ ಬದಲಿಸಿ ಮರು ಎಣಿಕೆ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಸಾಂವಿಧಾನಿಕ ಬಿಕ್ಕಟ್ಟು ಅಮೆರಿಕೆಯನ್ನು ಆವರಿಸುತ್ತದೆ ಸುಮಾರು ಆರು ವಾರಗಳ ನಂತರ ಸರ್ವೋಚ್ಚ ನ್ಯಾಯಾಲಯದ ಸಹಾಯದಿಂದ ಬುಶ್ ಗದ್ದುಗೆಗೆ ಏರುತ್ತಾರೆ ತನ್ನ ಕಪಟ ತಂತ್ರ ತೋರಿಸಿ. Bush stole the election ಎಂದು ಹಲವರು ಬೊಬ್ಬೆ ಇಟ್ಟರೂ ಏನೂ ಫಲಿಸುವುದಿಲ್ಲ. ಈ ಆಘಾತದಿಂದ ಚೇತರಿಸಿಕೊಂಡ ಅಲ್-ಗೋರ್ ಗೆ ಸಾಂತ್ವನ ನೀಡಿ ತನ್ನ ಪರವಾಗಿ ಹೋರಾಡುವಂತೆ ಕೋರಿತು ನಿಸರ್ಗ ಅಲ್-ಗೋರ್ ಅವರಲ್ಲಿ.

ಅಲ್-ಗೋರ್ ಅಂತರ್ಜಾಲ ತಂತ್ರಜ್ಞಾನ ಅಮೆರಿಕೆಯ ಮೂಲೆ ಮೂಲೆ ತಲುಪುವಂತೆ ಮಾಡಿದ ವ್ಯಕ್ತಿ. ಹವಾಮಾನ, ನಿಸರ್ಗಕ್ಕಾಗಿ ಹೋರಾಡಿದ ಅಲ್-ಗೋರ್ ನೊಬೆಲ್ ಪ್ರಶಸ್ತಿ ವಿಜೇತರು. ಈ ವೈವಾಹಿಕ ಸಂಕಷ್ಟದಲ್ಲಿ ಸಿಲುಕಿರುವ ಈ ಲವಲವಿಕೆಯ ಜೋಡಿಗೆ ತಾವು ಆರಿಸಿಕೊಂಡ ದಾರಿ ಸುಗಮವಾಗಲೆಂದು ಹಾರೈಸೋಣವೇ?

ಒಬ್ಬ ಒಳ್ಳೆಯ, ಮನಸ್ಸಿಗೆ ಒಪ್ಪುವ ವ್ಯಕ್ತಿಯನ್ನು ನಾವು ಸ್ಮರಿಸಬೇಕಾದರೆ ಅವನು ಸಾಯಬೇಕು, ಅಥವಾ ಗೋರ್ ರೀತಿಯಲ್ಲಿ ಬದುಕಿನಲ್ಲಿ ದೊಡ್ಡ ಏಟನ್ನು ಅನುಭವಿಸಬೇಕು. ಅವರ ವ್ಯಕ್ತಿತ್ವದ ಬಗ್ಗೆ ಅರಿಯಲು ನಮಗೆ ತೋಚಿದ ಸಮಯ ಅವರು ನ್ಯಾಯಾಲಯದ ಮೆಟ್ಟಿಲು ಹತ್ತುವ ಸಮಯ, ತನ್ನ ವೈವಾಹಿಕ ಬದುಕನ್ನು (ವಿವಾಹಗಳು ಸ್ವರ್ಗದಲ್ಲಿ ಏರ್ಪಡುತ್ತವೆ, ಬಾಕಿ ಕಾರ್ಯಗಳು ಕೋರ್ಟ್ ಗಳಲ್ಲಿ ) dissolve  ಮಾಡಲು ನ್ಯಾಮೂರ್ತಿಯನ್ನು ಕೇಳುವ ಸಮಯ. ಸ್ವರ್ಗದಲ್ಲಿ ಶುಭ್ರ, ಶ್ವೇತ ದೇವದೂತರ ಸಮ್ಮುಖದಲ್ಲಿ ಜರುಗುವ ಮದುವೆ ಕಪ್ಪು ಕೋಟುಗಳನ್ನು ತೊಟ್ಟ ವಕೀಲರ ಮಧ್ಯೆ ಪರ್ಯವಸಾನ.   

ದಶಕಗಳ ಹಿಂದೆ ನನ್ನ ಶಾಲಾ ಮೇಷ್ಟರೊಬ್ಬರು ಹೇಳಿದ ಮಾತು. ವಿಚ್ಚೇದನ ಸರ್ವೇ ಸಾಮಾನ್ಯ ಪಾಶ್ಚಾತ್ಯರಲ್ಲಿ. ಒಬ್ಬಾಕೆ ತನ್ನ ಗಂಡನನ್ನು ತೊರೆದು ಇನ್ನೊಬ್ಬ ನನ್ನು ಮದುವೆಯಾಗುತ್ತಾಳೆ. ಆತನೂ ವಿಚ್ಛೇದಿತ. ಇಬ್ಬರಿಗೂ ತಮ್ಮ ಮಾಜಿ ಸಂಗಾತಿಗಳಿಂದ ಮಕ್ಕಳಿರುತ್ತವೆ. ಇವರು ಮದುವೆಯಾದ ನಂತರ ಇವರಿಗೂ ಮಕ್ಕಳಾಗುತ್ತವೆ. ಆಗ ಮಕ್ಕಳು ಜಗಳವಾಡುವಾಗ ಹೆಂಡತಿ ತನ್ನ ಗಂಡನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ ” honey, my children and your children are fighting with “OUR” children” ಅಂತ.

ಪುರುಷರೇಕೆ ಚಿಕ್ಕ ಪ್ರಾಯದ ಅಥವಾ ಎಳೆ ಪ್ರಾಯದ ಹೆಣ್ಣುಗಳನ್ನು ಬಯಸುತ್ತಾರೆ?

ಪುರುಷರೇಕೆ ಚಿಕ್ಕ ಪ್ರಾಯದ ಅಥವಾ ಎಳೆ ಪ್ರಾಯದ ಹೆಣ್ಣುಗಳನ್ನು ಬಯಸುತ್ತಾರೆ? ಭಾರತದಲ್ಲಿ ಈ ವಿದ್ಯಮಾನ ದೊಡ್ಡ ರೀತೊಯಲ್ಲಿ ಇಲ್ಲದಿದ್ದರೂ ಪಾಶ್ಚಾತ್ಯರಲ್ಲಿ ಇದನ್ನು ಹೆಚ್ಚು ಕಾಣಬಹುದು. ಉದಾಹರಣೆಗೆ ಇಟಲಿಯ ಪ್ರಧಾನಿ ಅಗರ್ಭ ಶ್ರೀಮಂತ ೭೨ ವರುಷ ಪ್ರಾಯದ ಬೆರ್ಲಸ್ಕೊನಿ ಗೆ ೧೮ ರ ಹರೆಯದ ಪ್ರೇಯಸಿ. ಈ ಪ್ರಣಯದ ಪರಿಣಾಮ ವಿಚ್ಚೇದನ. ಇಟ್ಟು ಕೊಂಡವಳು ಬಂದಾಗ ಕಟ್ಟಿ ಕೊಂಡವಳು ಕಟ್ಟಿಕೊಂಡಳು ಗಂಟು ಮೂಟೆಯನ್ನು. ೭೨ ರ್ ಈ ತರುಣನಿಗೆ ಇದು ಹೊಸತಲ್ಲ. ಸಾಮಾನ್ಯವಾಗಿ ಈತ ಬೇಟೆಯಾಡುವುದೇ “ಮೈ ತುಂಬಿದಾ ಮಾಗಿದ ಸಿಹಿಯ” ಹುಡುಗಿಯರನ್ನು. ಈ ರೀತಿಯ ಮುದುಕರು ಹರೆಯದ ಹೆಣ್ಣುಗಳ ಹಿಂದೆ ಹೋಗುವಾಗ ಸ್ತ್ರೀ ಮಣಿಗಳಿಗೆ ಉರಿ. ಈ ಗಂಡಸರಲ್ಲಿ ಏನಿರಬಹುದು ಎಂದು ಹುಡುಗಿಯರು ಹಿಂದೆ ಬೀಳುತ್ತಾರೋ ಎಂದು.  ಕೆಲವರಿಗೆ ತಮಾಷೆ, ತಮ್ಮದೇ ಕಾರಣಗಳನ್ನು ನೀಡಿ ಉರಿಯುವ ಉದರಕ್ಕೆ ಒಂದಿಷ್ಟು ಶಾಂತಿ ಮಾಡೋದು. ಕೆಳಗಿವೆ ನೋಡಿ ಕೆಲವೊಂದು ಕಾರಣಗಳು ಪಡ್ಡೆ ಹುಡ್ಗೀರು ಏಕೆ ಮುದಿಯರ ಬೆನ್ನ ಹಿಂದೆ ಎಂದು.

೧. ಮುದಿಯನೊಂದಿಗೆ ಬರುತ್ತದೆ ಅವನು ಉಳಿಸಿದ ಹಣ.

೨. ದಿನಕ್ಕೆರಡು, ಮೂರು ಸಾರಿಯಾದರೂ ಫೋನ್ ಮಾಡಿ ವಿಚಾರಿಸಿ ಕೊಳ್ಳುತ್ತಾನೆ. (ಇದ್ದಾಳೋ, ಇಲ್ಲಾ ಇನ್ಯಾವುದಾದರೂ ತರಲೆ ಮುದುಕ ಹಾರಿಸಿ ಕೊಂಡು ಹೋದನೋ ಎಂದು ನೋಡಲಾದರೂ )

೩. ಅವಳ home work ನಲ್ಲಿ ಅವನು ಸಹಾಯ ಮಾಡಬಹುದು.

೪. ಅವಳಿಗೆ ಉಳುಕಿದಾಗ ಅವನ ಊರುಗೋಲನ್ನು ಉಪಯೋಗಿಸಬಹುದು.

೫. ಲೈಂಗಿಕ ಕ್ರೀಡೆಯಲ್ಲಿ ಸಾವಧಾನ ಮತ್ತು ಸಹನೆ.

೬. ಅವನು ಆಕೆಯನ್ನು ಸುಲಭವಾಗಿ ಬದಲಿಸುವುದಿಲ್ಲ (ಬದಲಿಸಿದರೆ ಇದೆ ಥರದ ಗಿಳಿ ಎಲ್ಲಿ ಸಿಕ್ಕಬಹುದು?)

ಇನ್ನೂ ಏನೇನೋ ನಮೂನಿ, ನಮೂನಿ, ಕಾರಣಗಳು…

ಹುಲ್ಲಾಗು ಬೆಟ್ಟದಡಿ,, ಸಿಹಿಯಾಗು ಮಾತಿನಲ್ಲಿ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು — ಮಂಕುತಿಮ್ಮ ।।

ಸಿಹಿಯಾಗು ಮಾತಿನಲ್ಲಿ, ಬೆಳಕಾಗು ಬಾಳಿನಲ್ಲಿ

ರೋಷಾ….ಬಿಡೂ, ಬಿಡೂ, ಸಾಕೂ….   

ಸಂಪದದಲ್ಲಿ ಸಿಕ್ಕ ಈ ಡೀ ವೀ ಜೀ ಯವರ ಸಾಲುಗಳು ಇಷ್ಟವಾದವು, ಹಾಗೆಯೇ ಅದನ್ನು ಓದುತ್ತಿರುವಾಗ “ಸಿಹಿಯಾಗು ಮಾತಿನಲ್ಲಿ…..” ಹಾಡು ನೆನಪಿಗೆ ಬಂತು.

ಈ ಮೇಲಿನ ಮಾತುಗಳು ಬಹುಶಃ ಹಗೆ ವರ್ತಕರಿಗೆ ಇಷ್ಟವಾಗದಿರಬಹುದು. ಆದರೂ ಒಂದಲ್ಲ ಒಂದು ದಿನ ತಮ್ಮ “ವ್ಯಾಪಾರ” ಬಿಟ್ಟು ಮಾನವೀಯ ಮೌಲ್ಯಗಳ ಕಡೆ ಗಮನ ಕೊಡುವರೆಂಬ ಆಶಯ ಮನದ ಮೂಲೆಯಲ್ಲಿ.