ವೈ ಎಸ್ಸ್ ಆರ್ – ಒಂದು ಬ್ಲಾಗಾಂಜಲಿ

ನಿಸರ್ಗದ ವೈಪರೀತ್ಯಕ್ಕೋ ಅಥವಾ ಬೇರಾವುದಾದರೂ ನಿಗೂಢ ಕಾರಣಗಳಿಗೋ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಆಂಧ್ರದ ಜನನಾಯಕ, ಜನಪ್ರಿಯ ಮುಖ್ಯಮಂತ್ರಿ Y.S. ರಾಜಶೇಖರ ರೆಡ್ಡಿಯವರ ಅಕಾಲಿಕ ಮರಣ ಆಂಧ್ರಕ್ಕೆ ಮಾತ್ರವಲ್ಲ ದೇಶಕ್ಕೆ ಒಂದು ದೊಡ್ಡ ಆಘಾತ ಮತ್ತು ನಷ್ಟ. ಯಾರೇ ಸಾವನ್ನಪ್ಪಿದರೂ ತುಂಬಲಾರದ ನಷ್ಟ ಎಂದು ಅನುಕಂಪದ ಮಾತು ಹೇಳುವುದಿದೆ . ಆದರೆ ಈ ಮಾತು ವೈ ಎಸ್ಸ್ ಆರ್ ಅವರಿಗೆ ಅನ್ವಯಿಸುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಬಡತನವನ್ನು, ನಿಸ್ಸಹಾಯಕತೆಯನ್ನು ಇವೆಲ್ಲಕ್ಕೂ ಕಾರಣವಾಗುವ ಅಧಿಕಾರಶಾಹಿಯ ಮೊಂಡುತನವನ್ನು ಕಣ್ಣಾರೆ ಕಂಡು ಪರಿಹಾರ ಕಂಡುಕೊಳ್ಳಲು ಸ್ವತಃ ಪ್ರಯಾಣಿಸಿ ಪ್ರಯತ್ನಿಸುವ ರಾಜಕಾರಣಿಗಳು ವಿರಳ. ಕೇವಲ ಇವರ ವರ್ಚಸ್ಸಿನ್ನಿದಲೇ ಆಂಧ್ರ ರಾಜ್ಯವನ್ನು ಕಾಂಗ್ರೆಸ್ ತೆಕ್ಕೆಗೆ ಬೀಳಿಸಿಕೊಂಡ ಈ ಜನನಾಯಕ ಕೇಂದ್ರದ ಕಾಂಗ್ರೆಸ್ ನಾಯಕರುಗಳ ಮದ್ಧ್ಯೆ ಕಂಗೊಳಿಸುತ್ತಿದ್ದರು. ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಬಿಲ್ ಗೇಟ್ಸ್ ಮುಂತಾದ ಸೊಫ್ಟ್ವೇರ್ ಜನರ ಹಿಂದೆ ಅಲೆದು ಕೇವಲ ಹೈದರಾಬಾದ್ ನಗರವನ್ನು ( ನಮ್ಮ S.M. Krishna ಬೆಂಗಳೂರಿಗೆ ಇದ್ದ ಹಾಗೆ ) ಉದ್ಧಾರ ಮಾಡಿ ರೈತರ ಬಡ ಬಗ್ಗರ ಕಷ್ಟದ ಕಡೆ ಕಿವುಡುತನ ಪ್ರದರ್ಶಿಸಿದರೆ YSR ಹಳ್ಳಿ ಗ್ರಾಮಗಳ ಕಡೆ ದೃಷ್ಟಿ ಹರಿಸಿ ಜನ ಮೆಚ್ಚ್ಚುಗೆ ಸಾಧಿಸಿದರು. ಹೈದರಾಬಾದ್ನ ನೀರಿನ ಕಾರಂಜಿ ಚಿಲುಮೆಗಳನ್ನು, ರೈತರು ಹನಿ ಹನಿ ನೀರಿಗಾಗಿ ಪರಿತಪಿಸುವುದನ್ನು ಹೋಲಿಸಿ ಚುನಾವಣೆ ಗೆದ್ದು ತಾನು ಜನನಾಡಿ ಬಲ್ಲ ರಾಜಕಾರಣಿ ಎಂದು ದೇಶಕ್ಕೆ ತೋರಿಸಿದರು.

ಆದರೆ ವಿಧಿಯ ಆಟವೇ ಹೀಗೆ. ಜನಸೇವೆ ಮಾಡಿ ಲಕ್ಷಗಟ್ಟಲೆ ಜನರ ಮುಖದ ಮೇಲೆ ಮಂದಹಾಸ ತರಿಸುವ ರಾಜಕಾರಣಿಗಳು ಇಂಥ ಅವಘಡದಲ್ಲಿ ಸಾವನ್ನಪ್ಪಿದರೆ ಹೊಡಿ ಬಡಿ ಕಡಿ ಎಂದು ರಕ್ತಪಾತವೇ ನಮ್ಮ ಧರ್ಮ ಎಂದು ಸಮಾಜವನ್ನು ಒಡೆದು ಆಳುವ ರಾಜಕಾರಣಿಗಳು ದೀರ್ಘಾಯುಷಿಗಳಾಗಿ ಭೂಮಿಗೆ ಭಾರವಾಗಿ ಮೆರೆಯುತ್ತಾರೆ.

ಮಣ್ಣಿನ ಮಗ ರಾಜಶೇಖರ ರೆಡ್ಡಿಯವರಿಗೆ ಅಂತಿಮ ವಿದಾಯ ಹೇಳುತ್ತಾ…

ಶುದ್ಧತೆಗೇಕೆ ಅಸಡ್ಡೆ?

ಶುಚಿತ್ವಕ್ಕೂ ಭಾರತೀಯರಿಗೂ ಇರುವ ಸಂಬಂಧ ಅಷ್ಟಕ್ಕಷ್ಟೇ. ಒಂದು ದೇಶ ಎಷ್ಟು ಶುಚಿ ಎಂದು ನೋಡಬೇಕಾದರೆ ದೊಡ್ಡ ಸಂಶೋಧನೆಯನ್ನು ಕೈಗೊಳ್ಳುವ ಅಗತ್ಯವಿಲ್ಲ; ಆ ದೇಶದ ಹಣ, (ನಮ್ಮ ನೋಟುಗಳನ್ನು ನೋಡಿದ್ದೀರ? ಎಹ್ಸ್ತು ಕೊಳಕಾಗಿವೆ ಎಂದರೆ ಅವನ್ನು ಮುಟ್ಟಿದ ನಂತರ ಸಾಧಾರಣ ಸಾಬೂನಿನಿಂದಲೂ ಶುಚಿತ್ವ ಸಾಧಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿರುವ ಎಲ್ಲ ರೀತಿಯ ರೋಗಾಣುಗಳು ನಮ್ಮ ನೋಟುಗಳ ಮೇಲಿರುತ್ತವೆ.) ಮತ್ತು ಅಲ್ಲಿನ ರಸ್ತೆ ಬೀದಿಗಳು ಸಾಕು ಎಷ್ಟು ಶುಚಿ ಆ ದೇಶ ಎಂದು ಸಾರಲು. ಶ್ರದ್ಧೆಯಿಂದ ಜನರನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಮನಿಸಿ. ಒಬ್ಬ ಮೂಗು ತುರಿಸುವುದೋ ಅಥವಾ ಮೂಗಿನೊಳಕ್ಕೆ ಸಾಕಷ್ಟು ಆಳವಾಗಿ ಬೆರಳನ್ನು ತೂರಿಸಿ theory of relativity ಬಗ್ಗೆ ಚಿಂತಿಸುತ್ತಿದ್ದರೆ ಮತ್ತೊಬ್ಬ ತನ್ನ ಕುಂಡೆ ತುರಿಸಿಕೊಳ್ಳುತ್ತಿರುತ್ತಾನೆ.

 

ಐಶ್ವರ್ಯ ರೈ ಮದುವೆಗೆಂದು ಉತ್ತರಪ್ರದೇಶದ ಊರೊಂದರಲ್ಲಿ ಭಾರೀ ಪ್ರಮಾಣದಲ್ಲಿ ಲಡ್ಡು ತಯಾರಿ ಮಾಡುತ್ತಿದ್ದರು. ಅದರಲ್ಲಿ ಲಾಡೂ ಅಥವಾ ಲಡ್ಡು ಮಾಡುತ್ತಿದ್ದವ ತನ್ನ ‘ ಎಡಗೈಯ್ಯಿಂದ ‘ ಅತ್ಯಂತ ಉತ್ಸಾಹದಿಂದ ಕ್ಯಾಮೆರಾದ ಕಣ್ಣಿಗೆ ಚೆನ್ನಾಗಿ ಕಾಣುವಂತೆ ಉಂಡೆ ಮಾಡುತ್ತಿದ್ದದ್ದು ನೋಡಿ ಎರಡು ದಿನ ಊಟ ಮಾಡಲಾಗಲಿಲ್ಲ ಮಾತ್ರವಲ್ಲ ಎಂದಾದರೂ ಒಂದು ದಿನ ನಾಲಗೆ ಚಪಲಕ್ಕೆ ಬಿದ್ದು ಲಡ್ಡು ತಿನ್ನುವ ಆಸೆಯೂ ಅಂದೇ ಹಾರಿ ಹೋಯಿತು.

ಶುಚಿತ್ವ ಕಾಪಾಡಲು ಹಣ ಸಂಪತ್ತೇನೂ ಖರ್ಚಾಗುವುದಿಲ್ಲ. ಅದೊಂದು simple, natural trait. ಮನೆಗಳಲ್ಲೇ ಅದರ ತರಬೇತಿ ಸಿಗದೇ ಇದ್ದಾರೆ ಬೀದಿಯಲ್ಲಿ sikkeete? ಸುಮ್ಮ ಸುಮ್ಮನೆ ಹೋಗುವಾಗ ರಸ್ತೆ ಮೇಲೆ ಉಗುಳುವುದು, ಮಾತನಾಡುವಾಗ ಕೆರೆದುಕೂಳುವುದು ರಕ್ತಗತವಾಗಿಬಿಟ್ಟಿದೆ ಜನರಲ್ಲಿ. ನಮ್ಮ ಶುಚಿತ್ವದ ಪರಿ ನೋಡಿ ಪಾಶ್ಚಾತ್ಯರು ಅತಿ ಕಟ್ಟೆಚ್ಚರದಿಂದ ನಮ್ಮ ದೇಶದ ಪ್ರವಾಸ ಕೈಗೊಳ್ಳುತ್ತಾರೆ. ಸ್ವಲ್ಪ ಆಹಾರದಲ್ಲಿ ಎಡವಟ್ಟಾಗಿ ಒಂದು ಸಲಕ್ಕಿಂತ ಹೆಚ್ಚು ಶೌಚಾಲಯದ ಭೇಟಿ ಆದರಂತೂ ಅದಕ್ಕೆ delhi belly ಎಂದು ಹೇಳಿ ಲೇವಡಿ ಮಾಡುತ್ತಾರೆ. ಇದ್ದಕ್ಕಿದ್ದಂತೆ ಈ ಅಸಹ್ಯ ಹುಟ್ಟಿಸುವ ಚಟ ಅಥವಾ ನಡವಳಿಕೆ ಬಗ್ಗೆ ಬರೆದದ್ದೇಕೆಂದರೆ ಇಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಯಿತು. Only 44% Indians have clean hands ಶೀರ್ಷಿಕೆಯಡಿ ಯಾವಯಾವ ದೇಶದ ಜನ ಎಷ್ಟು ಶುಚಿತ್ವ ಉಳ್ಳವರು ಎಂದು ಪ್ರಕಟವಾಗಿತ್ತು. ಡೆಟ್ಟಾಲ್ ಸಂಸ್ಥೆ ಈ ಸಮೀಕ್ಷೆ ನಡೆಸಿ ನಮ್ಮ ಮಾನ ಮಾರುಕಟ್ಟೆಯಲ್ಲಿ ಹರಾಜಿಗೆ ಹಾಕಿತು. ಶೌಚಾಲಯಕ್ಕೆ ಹೋದ ನಂತರ ಕೇವಲ ೨೭ % ಭಾರತೀಯರು ಕೈ ತೊಳೆಯುತ್ತಾರಂತೆ. ಕೈ ಶುದ್ಧವಾಗಿಟ್ಟುಕೊಳ್ಳುವುದು ಆರೋಗ್ಯಕರ ಎಂದು ಶೇಕಡಾ ೯೦ ಕೆನಡಾ ದೇಶದವರು ನಂಬಿದರೆ ಶೇಕಡಾ ೪೪ ಭಾರತೀಯರು ಇದಕ್ಕೆ ಹೂಂಗುಟ್ಟಿದರು. 

ಮೂತ್ರ  ವಿಸರ್ಜನೆ ಮಾಡಿ ಎಷ್ಟು ಜನ ಜನನಾಂಗವನ್ನು ಶುದ್ಧಿ ಮಾಡಿಕೊಳ್ಳುತ್ತಾರೆ ಎಂದು dettol ಸಂಸ್ಥೆ ನಮ್ಮನ್ನು  ಕೇಳಿದ್ದಿದ್ದರೆ ದೊಡ್ಡ  ಅನಾಹುತವೇ ಆಗುತ್ತಿತ್ತೇನೋ?

get a haircut and get a real job

get a haircut and get a real job ಎನ್ನೋ ಒಂದು ಆಂಗ್ಲ ಹಾಡನ್ನು ಕೇಳಿರಬಹುದು. ಹರಿಯಾಣದ ಹಳ್ಳಿಯೊಂದರಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ತಲೆಬೋಳಿಸಿದರು. ಕೆಲಸಕಾಗಿ ಅಲ್ಲ, ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡಲಿಲ್ಲ ಎಂದು. ಒಬ್ಬನಿಗೆ ಅಂದರೆ ಉಚ್ಚ ಜಾತಿಗೆ ಸೇರಿದ ವ್ಯಕ್ತಿಗೆ ನಂಬರ್ ತಪ್ಪಿ ಒಬ್ಬ ದಲಿತ ಫೋನ್ ಮಾಡಿದ್ದಕ್ಕೆ ಅವನನ್ನು ಮಾರನೆ ದಿನ ಹಿಡಿದು ತಲೆಬೋಳಿಸಿ ಒದ್ದು ಬುದ್ಧಿ ಕಲಿಸಲಾಯಿತು. ತಪ್ಪು ಅರಿತ ನಂತರ ಈ ದಲಿತ ಎಷ್ಟೇ ಕ್ಷಮೆ ಕೇಳಿದರೂ ಕೇಳಲೊಲ್ಲದ ಸವರ್ಣೀಯರು ಅವನ ತಲೆ ಬೋಳಿಸಿ, ಚೆನ್ನಾಗಿ ಥಳಿಸಿ ಮೋಟರ್ ಸೈಕಲಿಗೆ ಅವನನ್ನು ಕಟ್ಟಿ ಮೆರವಣಿಗೆ ಮಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸದಂತೆ ತಾಕೀತು ಮಾಡಿ ಕಳಿಸಿದರು.

ಇತ್ತೀಚಿಗೆ ತಮಿಳು ನಾಡಿನಲ್ಲಿ ದಲಿತನೊಬ್ಬ ತನ್ನದೇ ಸೈಕಲನ್ನು ಓಡಿಸಿದ್ದಕ್ಕೆ ಚೆನ್ನಾಗಿ ಗೂಸಾ ತಿಂದ ಸವರ್ಣೀಯರಿಂದ.

ದಲಿತ ಗರ್ಭಿಣಿ ಮಹಿಳೆ ಆಸ್ಪತ್ರೆಯಲ್ಲಿ ವೈದ್ಯರ ನಿರಾಕರಣೆಯಿಂದ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಈಗ ಯಾವ ಮುಖ ಇಟ್ಟುಕೊಂಡು ನಮ್ಮ ಸಂಸ್ಕೃತಿಯ ಬಗ್ಗೆ ಪಾಶ್ಚಾತ್ಯರಿಗೆ ಪಾಠ ಹೇಳುವುದೋ ಏನೋ?

ಎರ್ರಾಬಿರ್ರಿ GDP ಗ್ರೋತು, ಸಾಫ್ಟ್ ವೇರ್ ಲೀಡರ್ರು, ಒಂದಿಷ್ಟು ಫ್ಲೈ ಓವರ್ರು ಸಾಕೆ ನಾವು ಮುಂದುವರಿದು ಅಮೇರಿಕೆಗೆ ಭುಜಕ್ಕೆ ಭುಜ ಕೊಟ್ಟು ನಿಲ್ಲುವಂತಾಗಿದ್ದೇವೆ ಎಂದು ಕೊಚ್ಚಿಕೊಳ್ಳಲು? ಎಲ್ಲಿಯವರೆಗೆ ಜಾತಿ ಪಾತಿ, ಹಣ ಅಂತಸ್ತನ್ನು ಮೀರಿ ಮಾನವೀಯತೆ ಮೆರೆಯುವುದಿಲ್ಲವೋ ಅಲ್ಲಿಯವರೆಗೆ ಒಂದು ರಾಷ್ಟ್ರ ತಾನು ಪ್ರಗತಿ ಕಡೆ ದಾಪುಗಾಲು ಹಾಕುತ್ತಿದ್ದೇನೆ ಎಂದು ಹೇಳಿಕೊಳ್ಳುವ ಅರ್ಹತೆ ಕಳೆದುಕೊಳ್ಳುತ್ತದೆ.